Advertisement

ಢಾಕಾ ವಿವಿಯಲ್ಲಿ ರವೀಂದ್ರನಾಥ್‌ ಟ್ಯಾಗೂರ್‌ ಪ್ರತಿಮೆ ಭಗ್ನ

10:07 PM Feb 20, 2023 | Team Udayavani |

ಢಾಕಾ : ಬಾಂಗ್ಲಾದೇಶದ ಢಾಕಾ ವಿವಿಯಲ್ಲಿ ವಿದ್ಯಾರ್ಥಿಗಳು ಇತ್ತೀಚೆಗಷ್ಟೇ ಸ್ಥಾಪಿಸಿದ್ದ, ನೊಬೆಲ್‌ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ್‌ ಟ್ಯಾಗೋರ್‌ ಅವರ ಕಾಣೆಯಾಗಿದ್ದ ಪ್ರತಿಮೆ ಭಗ್ನಗೊಂಡಿದೆ. ಜತೆಗೆ ಅದನ್ನೇ ಮರು ಸ್ಥಾಪಿಸಿರುವ ಘಟನೆ ವರದಿಯಾಗಿದೆ.

Advertisement

ವಿವಿಯಲ್ಲಿ ರಾಜಕೀಯ ಪ್ರೇರಿತ ಬೋಧನೆಗಳ ಜತೆಗೆ ವಿದ್ಯಾರ್ಥಿಗಳ ವಾಕ್‌ಸ್ವಾತಂತ್ರ್ಯ ಹತ್ತಿಕ್ಕುತ್ತಿರುವುದನ್ನು ಖಂಡಿಸಿ, ವಿವಿಯ ಕಲಾ ವಿಭಾಗದ ವಿದ್ಯಾರ್ಥಿಗಳು ಟ್ಯಾಗೋರ್‌ ಅವರ ಪ್ರತಿಮೆಯನ್ನು ಫೆ.14ರಂದು ಸ್ಥಾಪಿಸಿದ್ದರು. ಅದರಲ್ಲಿ ಪ್ರತಿಮೆಯ ಬಾಯಿಗೆ ಟೇಪ್‌ ಕಟ್ಟಿ, ಕೈನಲ್ಲಿರುವ ಗೀತಾಂಜಲಿಗೆ ಮೊಳೆ ಹೊಡೆಯುವ ಮೂಲಕ, ವಾಕ್‌ ಸ್ವಾತಂತ್ರ್ಯ ದಮನಗೊಳಿಸುತ್ತಿರುವುದರ ವಿರುದ್ಧ ಪ್ರತಿಭಟಿಸಲಾಗಿತ್ತು.

ಫೆ.16ರಂದು ಪ್ರತಿಮೆ ರಾತ್ರೋ ರಾತ್ರಿ ಕಾಣೆಯಾಗಿತ್ತು. ಬಳಿಕ 2 ಕಿ.ಮೀ.ದೂರದಲ್ಲಿ ಭಗ್ನಗೊಂಡ ಪ್ರತಿಮೆ ಸಿಕ್ಕಿದೆ. ಪ್ರತಿಮೆ 2 ಭಾಗವಾಗಿ ಭಗ್ನಗೊಂಡಿದೆ ಅಲ್ಲದೇ, ಬಾಯಲ್ಲಿದ್ದ ಟೇಪ್‌ ತೆಗೆದುಹಾಕಲಾಗಿತ್ತು. ವಿದ್ಯಾರ್ಥಿಗಳು ವಿವಿ ಶಿಸ್ತು ಪಾಲನಾಧಿಕಾರಿಯೇ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದು, ಅಧಿಕಾರಿ ಆರೋಪ ತಳ್ಳಿಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next