Advertisement

ಬ್ರಾಹ್ಮಣರ ಬಗ್ಗೆ ಫೇಸ್ ಬುಕ್ ನಲ್ಲಿ ಅವಹೇಳನ ; ಪೊಲೀಸ್ ಠಾಣೆಗೆ ದೂರು

08:57 AM Jun 12, 2021 | Team Udayavani |

ಗಂಗಾವತಿ: ಕೋವಿಡ್ ರೋಗದ ವಿರುದ್ಧ ಲಸಿಕೆ ಹಾಕಿಸಿಕೊಳ್ಳುವ ಕುರಿತಂತೆ ಫೇಸ್ ಬುಕ್ ನಲ್ಲಿ ಬ್ರಾಹ್ಮಣ ಸಮಾಜವನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿ ಸ್ಟೇಟಸ್ ಹಾಕಿರುವ ಕಾರಟಗಿ ಬ್ಲಾಕ್ ಕಾಂಗ್ರೆಸ್ ಗ್ರೂಪ್ ವಿರುದ್ಧ ಬ್ರಾಹ್ಮಣ ಸಮಾಜ ಬಿಜೆಪಿ ಮುಖಂಡರು ನಗರಠಾಣೆಯಲ್ಲಿ ದೂರು ನೀಡಿದ್ದಾರೆ.

Advertisement

ಗೋಮೂತ್ರ ಕುಡಿದರೆ ಕೋವಿಡ್ ಹೋಗುತ್ತದೆ ಎಂದು ಹೇಳುವವರು ಈಗ ಯಾಕೆ ಸೋಂಕಿನ ವಿರುದ್ದದ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ ಎಂಬ ಅರ್ಥದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬ್ರಾಹ್ಮಣ ಆರ್ಚಕ ವೇಷದಲ್ಲಿ ಇರುವ‌ ಪೋಟೊವನ್ನು ಸ್ಟೇಟಸ್ ಗೆ ಹಾಕಿರುವುದು ಖಂಡನೀಯ. ಉದ್ದೇಶ ಪೂರ್ವಕವಾಗಿ ಬ್ರಾಹ್ಮಣರನ್ನು ಟೀಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕೂಡಲೇ ಕಾರಟಗಿ ಬ್ಲಾಕ್ ಕಾಂಗ್ರೆಸ್ ಗ್ರೂಪ್ ಆಡ್ಮಿನ್ ಹಾಗೂ ಸ್ಟೇಟಸ್ ಹಂಚಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ನಗರ ಠಾಣೆಯ ಪಿ ಐ ವೆಂಕಟಸ್ವಾಮಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ:ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ: ಜೂ.16ರವರೆಗೆ ಆರೆಂಜ್‌ ಅಲರ್ಟ್‌ ಘೋಷಣೆ

ಈ ಸಂದರ್ಭದಲ್ಲಿ ಬಿಜೆಪಿ ನಗರಸಭೆ ಸದಸ್ಯ ವಾಸುದೇವ ನವಲಿ, ಬಿಜೆಪಿ ರಾಜ್ಯ ಮುಖಂಡ ನರಸಿಂಹರಾವ್ ಕುಲಕರ್ಣಿ, ಸಾಹಿತಿ ಪವನಕುಮಾರ ಗುಂಡೂರು,

ಬ್ರಾಹ್ಮಣ ಅಧ್ಯಕ್ಷ ರಾಘವೇಂದ್ರ ಮೇಗೂರು, ಕಾರ್ಯದರ್ಶಿ ಗುರುರಾಜ, ಪ್ರಹ್ಲಾದರಾವ ನವಲಿ ವಕೀಲರು, ಶ್ಯಾಮಾಚಾರ ಜೋಷಿ, ಅನಿಲ ದೇಸಾಯಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next