Advertisement

Manipal ಪೊಲೀಸರ ಹೆಸರಿನಲ್ಲಿ ಹಣ ವಸೂಲು: ಆರೋಪಿಗಳು ವಶಕ್ಕೆ

07:56 PM May 27, 2023 | Team Udayavani |

ಉಡುಪಿ: ಪೊಲೀಸರ ಹೆಸರಿನಲ್ಲಿ ಹಣ ವಸೂಲು ಮಾಡುತ್ತಿದ್ದ ಆರೋಪಿಗಳನ್ನು ಮಣಿಪಾಲ ಠಾಣೆಯ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Advertisement

ಶಿರ್ವ ಮೂಲದ ಮಂಜುನಾಥ ಅವರು ಮಣಿಪಾಲದ ಅರ್ಬಿಫಾಲ್ಸ್‌ ಬಳಿ ಸ್ನೇಹಿತರೊಂದಿಗೆ ಮೇ 26ರಂದು ಮಾತನಾಡುತ್ತಿರುವ ವೇಳೆ ಆರೋಪಿಗಳಾದ ಹನುಮಂತಪ್ಪ ಹಾಗೂ ಮಹಾದೇವಪ್ಪ ಅವರು ಸ್ಥಳಕ್ಕೆ ಆಗಮಿಸಿ ತಾನು ಮಣಿಪಾಲ ಠಾಣೆಯ ಪೊಲೀಸ್, ನೀವು ಇಲ್ಲಿ ಯಾಕೆ ಕುಳಿತಿದ್ದೀರಿ? ನಿಮ್ಮ ಮೇಲೆ ಕೇಸ್ ಮಾಡುತ್ತೇನೆ ಎಂದು ಹೇಳಿದ್ದಾರೆ. ಬಳಿಕ ಮಣಿಪಾಲ ಠಾಣೆಯ ಎಸ್‌ಐ ಅವರಿಗೆ ಫೋನ್ ಮಾಡುತ್ತೇನೆ ಅವರು ಹೇಳಿದರೆ ಬಿಡುತ್ತೇನೆ ಎಂದು ಹೇಳಿ ಮತ್ತೋರ್ವ ಆರೋಪಿ ಲಕ್ಷ್ಮಣ ಕುಪ್ಪಗೊಂಡ ಅವರಿಗೆ ಕರೆ ಮಾಡಿ ಲೌಡ್‌ಸ್ಪೀಕರ್ ಇಟ್ಟು ಮಾತನಾಡಿದ್ದಾರೆ.

ಈ ವೇಳೆ ಆ ವ್ಯಕ್ತಿ ತಾನು ಮಣಿಪಾಲ ಠಾಣೆಯ ಎಸ್‌ಐ ಮಾತನಾಡುತ್ತಿದ್ದೇನೆ. 5 ಸಾವಿರ ರೂ.ಅವರಿಗೆ ನೀಡು ಇಲ್ಲವಾದರೆ ಜೀಪು ಕಳುಹಿಸಿ ಪೊಲೀಸ್ ಠಾಣೆಗೆ ಕರೆಸಿಕೊಳ್ಳುತ್ತೇನೆ ಎಂದು ಬೆದರಿಸಿದ ಪರಿಣಾಮ ಮಂಜುನಾಥ ಅವರು ಆರೋಪಿಗಳು ಸೂಚಿಸಿದ ಮೊಬೈಲ್ ಸಂಖ್ಯೆೆಗೆ ಗೂಗಲ್ ಪೇ ಮೂಲಕ ಹಣ ವರ್ಗಾವಣೆ ಮಾಡಿದ್ದರು. ಅನುಮಾನಗೊಂಡ ಮಂಜುನಾಥ ಅವರು ಮಣಿಪಾಲ ಠಾಣೆಗೆ ಬಂದು ದೂರು ನೀಡಿದಾಗ ವಿಚಾರ ಬೆಳಕಿಗೆ ಬಂದಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next