Advertisement

ಕೊನೆಗೂ ಪರಂಬೀರ್‌ ಸಿಂಗ್‌ ಪ್ರತ್ಯಕ್ಷ 

11:43 PM Nov 25, 2021 | Team Udayavani |

ಮುಂಬಯಿ: ಏಳು ತಿಂಗಳಿಂದ “ನಾಪತ್ತೆ’ಯಾಗಿದ್ದ ಮುಂಬಯಿಯ ನಿವೃತ್ತ ಪೊಲೀಸ್‌ ಆಯುಕ್ತ ಪರಂಬೀರ್‌ ಸಿಂಗ್‌ ಗುರುವಾರ ಪ್ರತ್ಯಕ್ಷರಾಗಿ­ದ್ದಾರೆ. ಇದುವರೆಗೆ ತಾವು ಚಂಡೀಗಢ

Advertisement

ದಲ್ಲಿಯೇ ಇದ್ದ ಬಗ್ಗೆ ಹೇಳಿಕೊಂಡಿದ್ದಾರೆ. ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಮುಂಬಯಿಯ ಕ್ರೈಮ್‌ ಬ್ರ್ಯಾಂಚ್‌ ಕಚೇರಿಯಲ್ಲಿ ಆರು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ. ಜತೆಗೆ ಮಹಾರಾಷ್ಟ್ರ ಸರಕಾರ

ನೇಮಿಸಿರುವ ನ್ಯಾ| ಚಂಡೀವಾಲ್‌ ನೇತೃತ್ವದ ಸಮಿತಿಯ ಮುಂದೆ ಹಾಜರಾಗಿ ವಿಚಾರಣೆ ಎದುರಿಸುವಂತೆ ಅವರಿಗೆ ಸೂಚಿಸಲಾಗಿದೆ. ಇಲ್ಲದೇ ಇದ್ದರೆ ಅವರನ್ನು ಬಂಧಿಸುವಂತೆ ಆದೇಶ ನೀಡಬೇಕಾಗುತ್ತದೆ ಎಂದು ಆಯೋಗ ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next