Advertisement

Express train ಬರುವ ವೇಳೆ ಟ್ರ್ಯಾಕ್ ಮೇಲೆ ಲಾರಿ ಟೈರ್‌; ಆರೋಪಿ ಬಂಧನ!

08:43 PM Jun 03, 2023 | Team Udayavani |

ತಿರುಚ್ಚಿ :ಒಡಿಶಾದಲ್ಲಿ ಘೋರ ರೈಲು ದುರಂತದ ವೇಳೆಯಲ್ಲೇ ತಮಿಳುನಾಡಿನಲ್ಲಿ ಚೆನ್ನೈ-ಕನ್ಯಾಕುಮಾರಿ ಎಕ್ಸ್‌ಪ್ರೆಸ್ ರೈಲು ಬರುತ್ತಿದ್ದ ವೇಳೆ ಹಳಿ ಮೇಲೆ ಹಾಕಲಾಗಿದ್ದ ಲಾರಿ ಟೈರ್‌ಗೆ ಢಿಕ್ಕಿ ಹೊಡೆದ ಘಟನೆ ನಡೆದಿದ್ದು, ಯಾವುದೇ ದೊಡ್ಡ ಹಾನಿ  ಸಂಭವಿಸಿಲ್ಲ.

Advertisement

ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಟೈರ್ ಹಾಕಿದ್ದ ಆರೋಪಿಯನ್ನು ಬಂಧಿಸಲು ವಿಶೇಷ ತಂಡಗಳನ್ನು ರಚಿಸಿದ್ದಾರೆ.

ತಿರುಚ್ಚಿ ಜಂಕ್ಷನ್‌ನಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಮೇಳ ವಾಲಾಡಿಯಲ್ಲಿ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಎರಡು ಲಾರಿ ಟೈರ್‌ಗಳನ್ನು ಇರಿಸಲಾಗಿದ್ದು, ಒಂದು ಟೈರ್ ಹಳಿಗಳ ನಡುವೆ ಬಿದ್ದಿರುವುದು ಕಂಡುಬಂದಿದೆ ಮತ್ತು ಇನ್ನೊಂದು ಟೈರ್ ಅನ್ನು ನಿಲ್ಲಿಸಿ ಇಸಲಾಗಿದೆ ಎಂದು ರೈಲ್ವೆ ಪೊಲೀಸ್ ಮೂಲಗಳು ತಿಳಿಸಿವೆ.

ತಿರುಚ್ಚಿ ಜಂಕ್ಷನ್‌ನಿಂದ ವೇಗ ಪಡೆದ ಎಕ್ಸ್‌ಪ್ರೆಸ್ ರೈಲು ಟೈರ್ ಒಂದಕ್ಕೆ ಢಿಕ್ಕಿ ಹೊಡೆದು ಬ್ರೇಕ್ ಹಾಕಿ ಸ್ವಲ್ಪ ದೂರದಲ್ಲಿ ನಿಂತಿತ್ತು. ಪರಿಣಾಮ ರೈಲಿನ ಆರು ಬೋಗಿಗಳಲ್ಲಿ ಒಂದು ಮೆದುಗೊಳವೆ ತುಂಡಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ತನಿಖೆಯ ವೇಳೆ, ಟೈರ್‌ಗಳು ಲಾರಿ ಮಾಲಕರಿಗೆ ಸೇರಿದ್ದು, ಅವರ ಮನೆ ಟ್ರ್ಯಾಕ್‌ನಿಂದ ಸ್ವಲ್ಪ ದೂರದಲ್ಲಿದೆ ಎಂದು ತಿಳಿದುಬಂದಿದೆ. ದೂರದ ಸ್ಥಳದಲ್ಲಿ ಈ ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿದ್ದು, ಪೊಧಿಗೈ ಎಕ್ಸ್‌ಪ್ರೆಸ್ ರೈಲು ಸುಮಾರು 25 ನಿಮಿಷಗಳ ಹಿಂದೆ ಅದೇ ಸ್ಥಳದಲ್ಲಿ ಯಾವುದೇ ಅಡೆತಡೆಯಿಲ್ಲದೆ ಹಾದು ಹೋಗಿತ್ತು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next