Advertisement

ಮುಲ್ಲಾ ಮಾರಿಯಿಂದ ಹೆಚ್ಚುವರಿ ನೀರು ನದಿಗೆ

02:31 PM Aug 04, 2022 | Team Udayavani |

ಚಿಂಚೋಳಿ: ತಾಲೂಕಿನಲ್ಲಿ ಬುಧವಾರ ಬೆಳಗಿನ ಜಾವ ರಭಸದಿಂದ ಮಳೆ ಸುರಿದಿದ್ದರಿಂದ ಕೆಳದಂಡೆ ಮುಲ್ಲಾಮಾರಿ ಜಲಾಶಯದಲ್ಲಿ ಒಳಹರಿವು ಹೆಚ್ಚಾಗಿ ಎರಡು ಗೇಟಿನ ಮೂಲಕ ನದಿಗೆ ಹೆಚ್ಚುವರಿ ನೀರು ಹರಿ ಬಿಡಲಾಗಿದೆ ಎಂದು ಎಇಇ ಹಣಮಂತಪ್ಪ ಪೂಜಾರಿ ತಿಳಿಸಿದ್ದಾರೆ.

Advertisement

ಕೆಳದಂಡೆ ಮುಲ್ಲಾಮಾರಿ ಜಲಾಶಯ ಅಚ್ಚುಕಟ್ಟು ಪ್ರದೇಶದಲ್ಲಿ ಬುಧವಾರ ಮಧ್ಯರಾತ್ರಿಯಿಂದ ಬೆಳಗಿನ ಜಾವ 5ಗಂಟೆ ವರೆಗೆ ವ್ಯಾಪಕ ಮಳೆ ಸುರಿದ ಪರಿಣಾಮವಾಗಿ ಜಲಾಶಯಕ್ಕೆ 2322ಒಳಹರಿವು ಹೆಚ್ಚಿದೆ. ಹೀಗಾಗಿ 2300ಕ್ಯೂಸೆಕ್‌ ನೀರನ್ನು ನದಿಗೆ ಹರಿ ಬಿಡಲಾಗಿದೆ.

ಚಿಮ್ಮನಚೋಡ, ತಾಜಲಾಪುರ, ಕನಕಪುರ, ಗಾರಂಪಳ್ಳಿ, ಗೌಡನಹಳ್ಳಿ, ನಿಮಾಹೊಸಳ್ಳಿ, ಗರಗಪಳ್ಳಿ ಬಳಿ ನದಿಗೆ ನಿರ್ಮಿಸಿದ ಬ್ಯಾರೇಜ್‌ ಜಲಾವೃತವಾಗಿದ್ದವು ಎಂದು ಕನಕಪುರ ಗ್ರಾಮದ ಶ್ರೀಧರ ವಗ್ಗಿ ತಿಳಿಸಿದ್ದಾರೆ. ದೇಗಲಮಡಿ ಗ್ರಾಮದ ಹಳ್ಳ ಸಂಪೂರ್ಣವಾಗಿ ತುಂಬಿ ಹರಿದಿದೆ ಎಂದು ಮಸ್ತಾನ್‌ ಕೋಡ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next