Advertisement

ಎಂ.ಆರ್‌.ಸೀತಾರಾಂ ಕಾಂಗ್ರೆಸ್‌ಗೆ ಗುಡ್‌ ಬೈ? : ಇಂದು ಬೆಂಬಲಿಗರ ಜತೆ ಸಮಾಲೋಚನೆ

10:52 PM Jun 23, 2022 | Team Udayavani |

ಬೆಂಗಳೂರು: ಮಾಜಿ ಸಚಿವ ಎಂ.ಆರ್‌.ಸೀತಾರಾಂ ಅವರು ಕಾಂಗ್ರೆಸ್‌ಗೆ ಗುಡ್‌ ಬೈ ಹೇಳುವ ಸಾಧ್ಯತೆಯಿದೆ. ರಾಜಕೀಯವಾಗಿ ಪ್ರಮುಖ ತೀರ್ಮಾನ ಕೈಗೊಳ್ಳುವ ಸಂಬಂಧ ನಾಳೆ (ಶುಕ್ರವಾರ) ಬೆಂಬಲಿಗರು ಹಾಗೂ ಗಣ್ಯರ ಸಮಾಲೋಚನೆ ಸಭೆ ಕರೆದಿದ್ದಾರೆ.

Advertisement

ಬೆಂಬಲಿಗರಿಗೆ ಈ ಕುರಿತು ಪತ್ರ ಬರೆದಿರುವ ಅವರು, ಇತ್ತೀಚೆಗೆ ಪಕ್ಷದಲ್ಲಿ ತಮ್ಮನ್ನು ಕಡೆಗಣಿಸುತ್ತಿರುವ ಬಗ್ಗೆ ಹಾಗೂ ತಾವು ಪಕ್ಷ ನಿಷ್ಠನಾಗಿ ಮಾಡಿರುವ ಸೇವೆ, ನಿರ್ವಹಿಸಿರುವ ಹುದ್ದೆಗಳ ಬಗ್ಗೆಯೂ ಸವಿವರವಾಗಿ ಬಹಿರಂಗವಾಗಿಯೇ ತಿಳಿಸಿದ್ದಾರೆ. 1999 ಹಾಗೂ 2004ರಲ್ಲಿ ಮಲ್ಲೇಶ್ವರದಿಂದ ಗೆದ್ದಿದ್ದ ತಾನು 2008ರಲ್ಲಿ ಪಕ್ಷದ ಕೆಲವರ ವಿಶ್ವಾಸದ್ರೋಹ ಹಾಗೂ  ಒಳಸಂಚಿನಿಂದ ಸೋತಿದ್ದೆ. 2009ರಲ್ಲಿ ಚಿಕ್ಕಬಳ್ಳಾಪುರ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲು ಸಜ್ಜಾದರೂ ಟಿಕೆಟ್‌ ನಿರಾಕರಿಸಲಾಯಿತು. ಅನಂತರ 2012ರಲ್ಲಿ ಪರಿಷತ್‌ಗೆ ಆಯ್ಕೆಯಾದ 2018ರಲ್ಲಿ ನನ್ನೊಂದಿಗೆ ಆಯ್ಕೆಯಾದವರಿಗೆ ಮತ್ತೂಂದು ಅವಕಾಶ ಕೊಟ್ಟರೂ ನನಗೆ ನಿರಾಕರಿಸಲಾಯಿತು. ಇತ್ತೀಚೆಗೆ ಸಹ ರಾಜ್ಯ ನಾಯಕರು  ನನ್ನ ಹೆಸರು ಪರಿಷತ್‌ಗೆ ಶಿಫಾರಸು ಮಾಡಿದರೂ ರಾತೋ ರಾತ್ರಿ ಪಿತೂರಿ ನಡೆಸಿ ಅವಕಾಶ ನಿರಾಕರಿಸಲಾಯಿತು ಎಂದು ಪತ್ರದಲ್ಲಿ ಹೇಳಿದ್ದಾರೆ.

ಅರಮನೆ ಮೈದಾನದ  ವೈಟ್‌ ಪೆಟಲ್ಸ್‌ ಗಾರ್ಡೆನಿಯಾ ಆವರಣದಲ್ಲಿ ಬೆಂಬಲಿಗರ ಸಭೆ ಕರೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next