Advertisement

Ex-Minister ಇಕ್ಬಾಲ್ ಅನ್ಸಾರಿ ನಗರ ಸಂಚಾರದ ವೇಳೆ ಪೊಲೀಸ್ ಬೆಂಗಾವಲು; ತನಿಖೆ

07:39 PM Nov 04, 2023 | Team Udayavani |

ಗಂಗಾವತಿ: ನಗರದಲ್ಲಿ ಶನಿವಾರ ಜರುಗಿದ ರಾಜ್ಯ ನದಾಫ್,ಪಿಂಜಾರ್ ಸಮಾವೇಶಕ್ಕೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಪೊಲೀಸ್ ಬೆಂಗಾವಲಿನಲ್ಲಿ ಆಗಮಿಸುವ ಮೂಲಕ ಸರಕಾರಿ ವ್ಯವಸ್ಥೆ ದುರುಪಯೋಗ ಮಾಡಿಕೊಂಡಿದ್ದು ಈ ವ್ಯವಸ್ಥೆ ಮಾಡಿದ ಪೊಲೀಸ್ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಜರುಗಿಸುವಂತೆ ಕೆಆರ್ ಪಿ ಪಕ್ಷದ ಯುವ ಮುಖಂಡ ಯಮನೂರ ಚೌಡ್ಕಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಡಿವೈಎಸ್ಪಿ ಅವರನ್ನು ಒತ್ತಾಯಿಸಿದ್ದಾರೆ.

Advertisement

ಹಾಲಿ ಶಾಸಕ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅವರು ಅನೇಕ ಸಲ ಸಂಚಾರಿ ದಟ್ಟಣೆ ಯಲ್ಲಿ ಸಿಕ್ಕು ಹಾಕಿಕೊಂಡರೂ ಲಕ್ಷ್ಯ ವಹಿಸಿದ ಸ್ಥಳಿಯ ಪೊಲೀಸರು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬಂದಲ್ಲಿ ಹೋದಲು ಪೊಲೀಸ್ ಬೆಂಗಾವಲು ನೀಡುತ್ತಿದ್ದು, ಸರಕಾರಿ ವ್ಯವಸ್ಥೆ ದುರುಪಯೋಗ ಮಾಡುತ್ತಿದ್ದಾರೆ.ಕಾಯ್ದೆ ಕಾನೂನು ಅನುಸರಿಸಬೇಕಾದ ಪೊಲೀಸ್ ಇಲಾಖೆಯ ಯಾರ ಮುಲಾಜಿನಲ್ಲಿ ಇಲ್ಲ.ಸ್ಥಳೀಯ ಪೊಲೀಸರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಮುಂದೆ ಪೊಲಿಸ್ ವ್ಯವಸ್ಥೆ ದುರುಪಯೋಗವಾಗದಂತೆ ಎಸ್ಪಿಯವರು ಎಚ್ಚರಿಕೆ ವಹಿಸುವಂತೆ ಚೌಡ್ಕಿ ಒತ್ತಾಯಿಸಿದ್ದಾರೆ.

ತನಿಖೆ
ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರಿಗೆ ಶನಿವಾರ ಪೊಲೀಸ್ ಬೆಂಗಾವಲು ಹಾಕುವಂತೆ ಆದೇಶವಿರದಿದ್ದರೂ ಯಾಕೆ ಪೊಲೀಸ್ ಬೆಂಗಾವಲಿನಲ್ಲಿ ನದಾಫ್ ಸಮಾವೇಶಕ್ಕೆ ಕರೆ ತರಲಾಯಿತು ಎನ್ನುವ ಕುರಿತು ತನಿಖೆ ನಡೆಸಿ ಎಸ್ಪಿಯವರಿಗೆ ವರದಿ ಮಾಡಲಾಗುತ್ತದೆ ಎಂದು ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಉದಯವಾಣಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next