Advertisement

ಎಲ್ಲರೂ ಜೊತೆಗೂಡಿ ರಾಜ್ಯ ಪ್ರವಾಸ ಕೈಗೊಳ್ಳುತ್ತೇವೆ  : ಮಾಜಿ ಸಿಎಂ ಬಿ.ಎಸ್.ವೈ

08:18 PM Aug 30, 2021 | Team Udayavani |

ಶಿವಮೊಗ್ಗ: ಎಲ್ಲರೂ ಜೊತೆಗೂಡಿ ರಾಜ್ಯ ಪ್ರವಾಸ ಕೈಗೊಳ್ಳುತ್ತೇವೆ. ನಾನು ಒಬ್ಬನೇ ಹೋಗುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

Advertisement

ಇಂದು ಪಂಚವಟಿ ಕಾಲೋನಿಯಲ್ಲಿರುವ ಮಧುಕೃಪಾಗೆ ತೆರಳಿ ಸಂಘ ಪರಿವಾರದ ಹಿರಿಯರ ಜೊತೆ ಕೆಲಹೊತ್ತು ಮಾತುಕತೆ ನಡೆಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ನಾಳೆ ಬೆಂಗಳೂರಿಗೆ ಹೋಗಬೇಕಾಗಿತ್ತು. ಆದರೆ, ತುರ್ತು ಕಾರ್ಯದ ನಿಮಿತ್ತ ಇಂದೇ ಹೊರಟಿದ್ದೇನೆ. ಪರಿವಾರದ ಹಿರಿಯರ ಜೊತೆ ಸೇರಿ ತುಂಬಾ ದಿನ ಆಗಿತ್ತು. ಇಂದು ಕುಳಿತು ಮಾತುಕತೆ ನಡೆಸಿದ್ದೇನೆ. ಜಿಲ್ಲೆಯ ಅಭಿವೃದ್ಧಿ ಏನು ಆಗಿದೆ. ಏನು ಆಗಬೇಕಿದೆ ಎಂಬುದರ ಬಗ್ಗೆ ಸಲಹೆ ಪಡೆದು, ಹೋಗುತ್ತಿದ್ದೇನೆ.ಈ ಭೇಟಿಯಲ್ಲಿ ವಿಶೇಷ ಏನಿಲ್ಲ. ಪದ್ಧತಿಯಂತೆ ಹಿರಿಯರ ಜೊತೆ ಮಾತನಾಡಲು ಬಂದಿದ್ದೇನೆ ಅಷ್ಟೇ ಎಂದರು.

ಇನ್ನು ಗಣೇಶನ ಹಬ್ಬದ ನಂತರ ರಾಜ್ಯ ಪ್ರವಾಸ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಪಕ್ಷದ ಹಿರಿಯರು, ಅಧ್ಯಕ್ಷರು, ಸಚಿವರ ಜೊತೆ ಚರ್ಚೆ ಮಾಡಿ, ನಿರ್ಧಾರ ಮಾಡ್ತೇನೆ. ಇನ್ನೂ 25-30 ದಿನ ನಾನು ಎಲ್ಲಿಯೂ ಪ್ರವಾಸ ಹೆಚ್ಚು ಮಾಡುವುದಿಲ್ಲ. ಆದಾದ ನಂತರ ಪ್ರತಿಯೊಂದು ಜಿಲ್ಲೆಗ ಹೋಗಲು ಯೋಚನೆ ಮಾಡಿದ್ದೇನೆ. ಎಲ್ಲರೂ ಜೊತೆಗೂಡಿ ಹೋಗ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next