Advertisement

ಇಡಬ್ಲ್ಯುಎಸ್‌ ಮೀಸಲಾತಿ: 3 ವಿಚಾರಗಳ ಪರಿಶೀಲನೆಗೆ ಸುಪ್ರೀಂ ನಿರ್ಧಾರ

08:10 PM Sep 08, 2022 | Team Udayavani |

ನವದೆಹಲಿ: ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ಮೀಸಲಾತಿ ಕಲ್ಪಿಸುವ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಗಳಿಂದ ಉದ್ಭವಿಸಬಹುದಾದ ಮೂರು ಪ್ರಮುಖ ವಿಚಾರಗಳನ್ನು ಚರ್ಚಿಸಲು ಸುಪ್ರೀಂ ಕೋರ್ಟ್‌ ಗುರುವಾರ ನಿರ್ಧರಿಸಿದೆ.

Advertisement

ಇಂಥ ವಿಶೇಷ ನಿಬಂಧನೆಗಳನ್ನು ರೂಪಿಸಲು ಸರ್ಕಾರಕ್ಕೆ ಅವಕಾಶ ಕಲ್ಪಿಸಿಕೊಡುವ ಮೂಲಕ ಸಂವಿಧಾನ (103ನೇ ತಿದ್ದುಪಡಿ) ಕಾಯ್ದೆಯು ಸಂವಿಧಾನದ ಮೂಲ ರಚನೆಯ ಆಶಯವನ್ನು ಉಲ್ಲಂಘಿಸಿದೆಯೇ ಎಂಬ ಬಗ್ಗೆಯೂ ಸಿಜೆಐ ಯು.ಯು.ಲಲಿತ್‌ ಅವರನ್ನೊಳಗೊಂಡ ಸಂವಿಧಾನ ಪೀಠ ನಿರ್ಧರಿಸಲಿದೆ. ಸೆ.13ರಿಂದ ಅರ್ಜಿಗಳ ವಿಚಾರಣೆ ಶುರುವಾಗಲಿದೆ.

ಜತೆಗೆ, ಖಾಸಗಿ ಅನುದಾನರಹಿತ ಸಂಸ್ಥೆಗಳ ಪ್ರವೇಶಕ್ಕೆ ಸಂಬಂಧಿಸಿ ವಿಶೇಷ ನಿಬಂಧನೆಗಳನ್ನು ತರಲು ಸರ್ಕಾರಕ್ಕೆ ಅವಕಾಶ ಕಲ್ಪಿಸುವ ಮೂಲಕ ಸಂವಿಧಾನದ ಆಶಯವನ್ನು ಉಲ್ಲಂಘಿಸಲಾಗಿದೆಯೇ, ಇಡಬ್ಲ್ಯುಎಸ್‌ ಮೀಸಲಾತಿಯ ವ್ಯಾಪ್ತಿಯಿಂದ ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದ ವರ್ಗಗಳು, ಒಬಿಸಿಗಳು, ಎಸ್‌ಸಿ-ಎಸ್‌ಟಿಗಳನ್ನು ಹೊರಗಿಡುವ ಮೂಲಕ 103ನೇ ತಿದ್ದುಪಡಿಯು ಸಂವಿಧಾನದ ಆಶಯವನ್ನು ಉಲ್ಲಂ ಸಿದೆಯೇ ಎಂಬ ಕುರಿತೂ ವಿಸ್ತೃತ ಪರಿಶೀಲನೆ ನಡೆಯಲಿದೆ ಎಂದು ಸಂವಿಧಾನ ಪೀಠ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next