Advertisement

ಸರ್ಕಾರದ ನಿಯಮ ಪಾಲನೆ ಪ್ರತಿಯೊಬ್ಬರ ಕರ್ತವ್ಯ

03:57 PM Oct 18, 2021 | Team Udayavani |

ಲಿಂಗಸುಗೂರು: ಸಾರ್ವಜನಿಕರ ಹಿತದೃಷ್ಟಿಯಿಂದಲೇ ಸರ್ಕಾರ ನಿಯಮಗಳನ್ನು ಜಾರಿ ಮಾಡಿದೆ. ಸರ್ಕಾರದ ನಿಯಮಗಳನ್ನು ಪಾಲನೆ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಡಿವೈಎಸ್‌ಪಿ ಎಸ್‌.ಎಸ್‌. ಹುಲ್ಲೂರು ಹೇಳಿದರು.

Advertisement

ಪಟ್ಟಣದ ಗುರುಭವನದಲ್ಲಿ ಈದ್‌ಮಿಲಾದ್‌ ಹಾಗೂ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ನಡೆದ ಶಾಂತಿಪಾಲನಾ ಸಭೆಯಲ್ಲಿ ಅವರು ಮಾತನಾಡಿದರು.

ಕೋವಿಡ್‌ ಹಿನ್ನೆಲೆಯಲ್ಲಿ ಈದ್‌ ಮಿಲಾದ್‌ ಹಾಗೂ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಮತ್ತು ಭಕ್ತಿ ಪೂರ್ವಕವಾಗಿ ಆಚರಿಸಬೇಕು. ಸಾಮೂಹಿಕ ಮೆರವಣಿಗೆ ಸಂಪೂರ್ಣವಾಗಿ ನಿಷೇಧಿಸಿದೆ. ಸಾರ್ವಜನಿಕ ಕಾರ್ಯಕ್ರಮದಲ್ಲಿ 100ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ ಎಂದರು.

ಸಿಪಿಐ ಮಹಾಂತೇಶ ಸಜ್ಜನ್‌, ಪಿಎಸ್‌ಐ ಪ್ರಕಾಶ ಡಂಬಳ, ಪುರಸಭೆ ಉಪಾಧ್ಯಕ್ಷ ಮಹ್ಮದ್‌ ರಫಿ, ಮಾಜಿ ಅಧ್ಯಕ್ಷ ಖಾದರಪಾಶಾ, ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ನಂದೇಶ ನಾಯಕ, ಮುಖಂಡರಾದ ಪ್ರಭುಸ್ವಾಮಿ, ಅಬ್ದುಲ್‌ ಬೇಕರಿ, ಬಾಬಾಖಾಜಿ, ಪುರಸಭೆ ವ್ಯವಸ್ಥಾಪಕ ವೆಂಕಟೇಶ, ಎಸ್‌ಟಿ ಕಚೇರಿ ವ್ಯವಸ್ಥಾಪಕ ರವಿಕುಮಾರ ಇನ್ನಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next