Advertisement
ಆಯಾ ತಿಂಗಳಲ್ಲಿ ಬರುವ ಜಿಲ್ಲೆಯ ಟೂರಿಸಂ ಆಕರ್ಷಣೆಗಳ, ಜನಪದ, ಸಾಂಸ್ಕೃತಿಕ ಆಚರಣೆ, ಉತ್ಸವಗಳ ಮಾಹಿತಿ ಇರುವ ಇವೆಂಟ್ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮಾತನಾಡಿ, ದಕ್ಷಿಣ ಕನ್ನಡದಲ್ಲಿರುವ ಆಕರ್ಷಣೆಗಳ ಬಗ್ಗೆ ಸ್ಥಳೀಯರೆಲ್ಲರಿಗೂ ಗೊತ್ತಿದೆ. ಇಲ್ಲಿ ಸ್ವತ್ಛತೆ, ಶಿಕ್ಷಣ, ಸೌಂದರ್ಯ ಎಲ್ಲವೂ ಇದೆ. ಎಲ್ಲರೂ ಒಟ್ಟಾಗಿ ಬದುಕುವ “ಕಾಸೊ¾ಪಾಲಿಟನ್’ (ವಿಶ್ವಮಿತ್ರ) ಪರಿಕಲ್ಪನೆಗೆ ಇದೊಂದು ಮಾದರಿಯಾಗಿದೆ. ಆದರೆ ಕಾರಣಾಂತರಗಳಿಂದ ಜಿಲ್ಲೆಯ ಪ್ರವಾಸೋದ್ಯಮ ಸಾಮರ್ಥ್ಯ ಪೂರ್ಣವಾಗಿ ಬಳಕೆಯಾಗಿಲ್ಲ. ಈಗ ಬಿಡುಗಡೆಯಾಗಿರುವ ಇವೆಂಟ್ ಕ್ಯಾಲೆಂಡರ್ ಹಾಗೂ ವೆಬ್ಸೈಟ್ಗಳು ಜಿಲ್ಲೆಯ ಆಕರ್ಷಣೆಗಳನ್ನು ಸಮರ್ಪಕವಾಗಿ ಹೊರಗಿನ ಜನರಿಗೆ ತಲಪಿಸುವ ವಿಶ್ವಾಸ ಇದೆ ಎಂದು ಹೇಳಿದರು.
Related Articles
Advertisement
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೌಜನ್ಯಾ ಹೆಗ್ಡೆ ನಿರೂಪಿಸಿ, ಗೌರವ್ ಹೆಗ್ಡೆ ವಂದಿಸಿದರು.ವೆಬ್ಸೈಟ್: //www.visitmangalore.in