Advertisement

ಪ್ರಧಾನಿ ಮೋದಿಗೂ ಅವರೇ ಸ್ಪೂರ್ತಿ: ಕಂಗನಾ ವಿರುದ್ಧ ಬಿಜೆಪಿ ವಕ್ತಾರ ಕಿಡಿ

11:41 AM Nov 18, 2021 | Team Udayavani |

ನವದೆಹಲಿ: ಮಹಾತ್ಮಾ ಗಾಂಧಿ ವಿರುದ್ಧದ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ನಟಿ ಕಂಗನಾ ರಣಾವತ್ ಅವರ ವಿರುದ್ಧ ದೆಹಲಿ ಬಿಜೆಪಿ ವಕ್ತಾರ ನಿಘತ್ ಅಬ್ಬಾಸ್ ಬುಧವಾರ ವಾಗ್ದಾಳಿ ನಡೆಸಿದ್ದಾರೆ.

Advertisement

ಟ್ವೀಟರ್ ನಲ್ಲಿ ವಿಡಿಯೋದಲ್ಲಿ ಮಾತನಾಡಿದ ಅಬ್ಬಾಸ್ , ‘ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರಿಂದ ಸ್ಫೂರ್ತಿ ಪಡೆದಿದ್ದಾರೆ, ಈ ರೀತಿಯ ಹೇಳಿಕೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕೆಟ್ಟ ಹೆಸರು ತರುತ್ತವೆ’ ಎಂದು ಕಿಡಿ ಕಾರಿದರು.

‘ಕಂಗನಾ ರಣಾವತ್ ಅವರು ಗಾಂಧಿ ಕುರಿತಾಗಿ ಅಸಂಬದ್ಧವಾಗಿ ಹೇಳುವ ಮೂಲಕ ಏನಾಗಲು ಬಯಸುತ್ತಾರೆ ಎಂಬುದನ್ನು ನಾನು ತಿಳಿದುಕೊಳ್ಳಲು ಬಯಸುತ್ತೇನೆ. ಇಂತಹ ಅಸಂಬದ್ಧ ಮಾತುಗಳನ್ನು ಹೇಳುವ ಮೂಲಕ ನಿತ್ಯವೂ ಸ್ವಾತಂತ್ರ್ಯ ಹೋರಾಟದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಾ ದೇಶದ ಜನತೆಗೆ ನೋವುಂಟು ಮಾಡುತ್ತಿದ್ದಾರೆ. ಆಕೆ ಕೇವಲ ದೇಶದ ಜನರನ್ನು ನೋಯಿಸುತ್ತಿಲ್ಲ ಆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ದೂಷಿಸುತ್ತಿದ್ದಾಳೆ ಎಂದು ನಾನು ಹೇಳುತ್ತೇನೆ’ ಎಂದು ಹೇಳಿದ್ದಾರೆ.

‘ಸುಭಾಸ್ ಚಂದ್ರ ಬೋಸ್ ಮತ್ತು ಭಗತ್ ಸಿಂಗ್ ಅವರನ್ನು ಮಹಾತ್ಮಾ ಗಾಂಧಿ ಬೆಂಬಲಲಿಸಲಿಲ್ಲ’ ಎಂದು ಹೇಳುವ ಮೂಲಕ ಅಹಿಂಸೆಯ ಮಂತ್ರವನ್ನು ಅಪಹಾಸ್ಯ ಮಾಡುವ ಮೂಲಕ’1947 ರಲ್ಲಿ ದೊರಕಿದ್ದು ಸ್ವಾತಂತ್ರ್ಯವಲ್ಲ ಭಿಕ್ಷೆ’ ಎಂಬ ಹೇಳಿಕೆಯನ್ನು ಕಂಗನಾ ಸಮರ್ಥಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next