Advertisement

ಏಟ್ಟುಮಾನೂರು ರೈಲಿಗೆ ತಾತ್ಕಾಲಿಕ ನಿಲುಗಡೆ

11:26 PM Jan 19, 2023 | Team Udayavani |

ಮಂಗಳೂರು: ಸೈಂಟ್‌ ಮೇರೀಸ್‌ ಫೋರೆನ್ಸ್‌ ಚರ್ಚ್‌ನ ವಾರ್ಷಿಕ ಹಬ್ಬದ ಹಿನ್ನೆಲೆಯಲ್ಲಿ ಜ. 24 ಮತ್ತು 25ರಂದು ಕೇರಳದ ಕೊಟ್ಟಾಯಂ ಜಿಲ್ಲೆಯ ಏಟ್ಟುಮಾನೂರು ರೈಲು ನಿಲ್ದಾಣದಲ್ಲಿ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆಗೆ ಅವಕಾಶ ನೀಡಲಾಗಿದೆ.

Advertisement

ನಂ.16630 ಮಂಗಳೂರು ಸೆಂಟ್ರಲ್‌-ತಿರುವನಂತಪುರ ಸೆಂಟ್ರಲ್‌ ಮಲಬಾರ್‌ ಎಕ್ಸ್‌ಪ್ರೆಸ್‌ ಏಟ್ಟುಮಾನೂರಿಗೆ ಜ. 24 ಮತ್ತು 25ರಂದು ಬೆಳಗ್ಗೆ 4.18ಕ್ಕೆ ಆಗಮಿಸಿ, 4.19ಕ್ಕೆ ತೆರಳಲಿದೆ. ನಂ.16629 ತಿರುವನಂತಪುರ ಸೆಂಟ್ರಲ್‌- ಮಂಗಳೂರು ಸೆಂಟ್ರಲ್‌ ಮಲಬಾರ್‌ ಎಕ್ಸ್‌ಪ್ರೆಸ್‌ ರಾತ್ರಿ 10.30ಕ್ಕೆ ಆಗಮಿಸಿ 10.31ಕ್ಕೆ ತೆರಳುವುದು. ನಂ. 16347 ತಿರುವನಂತಪುರ ಸೆಂಟ್ರಲ್‌- ಮಂಗಳೂರು ಸೆಂಟ್ರಲ್‌ ಎಕ್ಸ್‌ಪ್ರೆಸ್‌ ರಾತ್ರಿ 12.05ಕ್ಕೆ ಆಗಮಿಸಿ 12.06ಕ್ಕೆ ತೆರಳಲಿದೆ ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next