Advertisement
ಕೋಲಾರ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಕಳೆದ 116 ವರ್ಷಗಳಿಂದ ಬೀಳುತ್ತಿರುವ ಗರಿಷ್ಠ ಮತ್ತು ಕನಿಷ್ಠ ಮಳೆಯ ಪ್ರಮಾಣ, ಆ ಜಿಲ್ಲೆಯಲ್ಲಿರುವ ಕೆರೆಗಳು, ಮಣ್ಣಿನ ಗುಣಧರ್ಮ, ಅಲ್ಲಿನ ಒತ್ತುವರಿ ಆಧರಿಸಿ ಅಧ್ಯಯನ ನಡೆಸಿದ ವಿಜ್ಞಾನಿಗಳು, ಎತ್ತಿನಹೊಳೆಯಲ್ಲಿ ಸಿಗಬಹುದಾದ ನೀರಿನ ಪ್ರಮಾಣಕ್ಕಿಂತ ಎರಡು-ಮೂರುಪಟ್ಟು ಕೋಲಾರದಲ್ಲೇ ಸಿಗಲಿದೆ. ಆದರೆ, ಇದಕ್ಕೆ ಸ್ಥಳೀಯ ಪ್ರತಿನಿಧಿಗಳು, ಸರ್ಕಾರ ಮನಸ್ಸು ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Related Articles
ಜಿಐಎಸ್ (ಗ್ಲೋಬಲ್ ಇನ್ಫಾರೆ¾àಷನ್ ಸಿಸ್ಟ್ಂ) ಆಧಾರಿತ ಭೌಗೋಳಿಕ ಸಂಪನ್ಮೂಲಗಳ ವಿಶ್ಲೇಷಣಾ ವ್ಯವಸ್ಥೆ (ಜಿಆರ್ಎಸ್ಎಸ್) ಮೂಲಕ 1978, 1998 ಹಾಗೂ 2002ರ ಅವಧಿಯಲ್ಲಿನ ಕೋಲಾರದ ಭೌಗೋಳಿಕ ಚಿತ್ರಣವನ್ನು ನೋಡಿದಾಗ, ಜಲಮೂಲಗಳು ಬರಿದಾಗುತ್ತಾ ಬಂದಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಈ ಜಲಮೂಲಗಳು ಅನ್ಯಉದ್ದೇಶಗಳಿಗೆ ಬಳಕೆಯಾಗಿರುವುದನ್ನು ಕಾಣಬಹುದು. ಸೂಕ್ತ ನಿರ್ಧಾರಗಳ ಕೊರತೆ ಮತ್ತು ವ್ಯವಸ್ಥಿತ ಯೋಜನೆಗಳೇ ಇಲ್ಲದಿರುವುದರಿಂದ ಕೋಲಾರ ವ್ಯಾಪ್ತಿಯಲ್ಲಿರುವ ಶೇ. 40ರಷ್ಟು ಭೂಪ್ರದೇಶ ಪಾಳುಬಿದ್ದಿದೆ ಎಂದು ಅವರು ಹೇಳುತ್ತಾರೆ.
Advertisement
ಈ ಹಿನ್ನೆಲೆಯಲ್ಲಿ ಕೆರೆಗಳ ಹೂಳು ತೆಗೆದು, ಸಮಗ್ರ ಜಲಾನಯನ ಯೋಜನೆ ಮತ್ತು ನಿರ್ವಹಣೆ ಕೈಗೆತ್ತಿಕೊಳ್ಳುವ ತುರ್ತು ಅವಶ್ಯಕತೆ ಇದೆ. ಏಕರೂಪದ ಕೃಷಿ ಅಂದರೆ ಯಥೇತ್ಛವಾಗಿ ಬೆಳೆದ ನಿಲಗಿರಿಯನ್ನು ನಾಶಪಡಿಸಬೇಕು. ಅರೆ-ಒಣ ಪ್ರದೇಶದ ಬೆಳೆಗಳನ್ನು ಬೆಳೆಯುವ ರೈತರಿಗೆ ಪ್ರೋತ್ಸಾಹಧನ ನೀಡಬೇಕು. ನೀರಾವರಿ ಬೆಳೆಗಳಿಗೆ ನಿರ್ಬಂಧ ವಿಧಿಸಬೇಕು ಎಂದು ತಿಳಿಸುತ್ತಾರೆ.
ಆದರೆ ನೀರಾವರಿ ಹೋರಾಟ ಸಮಿತಿಯ ಆಂಜನೇಯರೆಡ್ಡಿ, ಮಳೆ ನೀರು ಸಂಗ್ರಹ ಒಂದೇ ಪರಿಹಾರವಲ್ಲ. ಮಳೆ ನೀರು ಹಿಡಿದಿಡುವುದು ಒಂದೆಡೆಯಾದರೆ, ಮತ್ತೂಂದೆಡೆ ಜಲಸಂಪನ್ಮೂಲ ಹೆಚ್ಚು ಇರುವ ಪ್ರದೇಶಗಳಿಂದ ಈ ಪ್ರದೇಶಗಳಿಗೆ ನೀರು ತರುವುದು. ಎರಡರ ಬಗ್ಗೆಯೂ ಚಿಂತನೆ ಅಗತ್ಯ ಎಂದು ಪ್ರತಿಪಾದಿಸುತ್ತಾರೆ.
ಮಳೆ ನೀರು ಹಿಡಿದಿಡುವ ಯಾವುದೇ ವ್ಯವಸ್ಥೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡೂ ಕಡೆಗಳಲ್ಲೂ ಇಲ್ಲ. ಪೋಷಕ ಕಾಲುವೆಗಳಿಂದ ಹರಿಯುವ ನೀರು ರಾಜುಕಾಲುವೆಗಳ ಮೂಲಕ ಹಾದು ಕೆರೆ-ಕುಂಟೆಗಳನ್ನು ಸೇರಬೇಕು. ಆದರೆ, ಆ “ಸಾಗಾಣಿಕೆ ಸಾಧನ’ಗಳೆಲ್ಲವೂ ಒತ್ತುವರಿಯಾಗಿದ್ದರಿಂದ ಸಮಸ್ಯೆ ಉದ್ಭವಿಸಿದೆ. ಹೀಗಾಗಿ, ಪರ್ಯಾಯ ಮಾರ್ಗದ ಬಗ್ಗೆಯೂ ಗಂಭೀರವಾಗಿ ಯೋಚಿಸುವುದು ಅವಶ್ಯಕ ಎಂದು ಹೇಳುತ್ತಾರೆ.
ಕೋಲಾರ ಜಿಲ್ಲೆಯ ಭೂಬಳಕೆ ವಿವರ (ಹೆಕ್ಟೇರ್ಗಳಲ್ಲಿ)ವರ್ಗ ಮೇಲುಸ್ತುವಾರಿ ಮಾಡಲ್ಪಟ್ಟ ಭೂಮಿ ಮೇಲುಸ್ತುವಾರಿ ಇಲ್ಲದ ಭೂಮಿ
ಕೃಷಿ 2,33,519 2,22,416
ನಿರ್ಮಿತ ಪ್ರದೇಶ 1,31,468 70,970
ಅರಣ್ಯ 68,300 85,295
ಮರಗಳ ತೋಪು 70,276 84,716
ಪಾಳುಬಿದ್ದ ಭೂಮಿ 3,20,284 3,60,450 – ವಿಜಯಕುಮಾರ್ ಚಂದರಗಿ