Advertisement

ತರಳಬಾಳು ಜಗದ್ಗುರು ಮಠದಲ್ಲಿ ಹುತಾತ್ಮ ಯೋಧರ ನಿಧಿ ಸ್ಥಾಪನೆ

11:11 PM Feb 15, 2020 | Lakshmi GovindaRaj |

ಸಿರಿಗೆರೆ: ದೇಶಸೇವೆ ಸಂದರ್ಭ ಪ್ರಾಣತ್ಯಾಗ ಮಾಡುವ ಸೈನಿಕರ ಕುಟುಂಬಗಳಿಗೆ ನೆರವಾಗುವ ದೃಷ್ಟಿಯಿಂದ ತರಳಬಾಳು ಜಗದ್ಗುರು ಬೃಹನ್ಮಠದಲ್ಲಿ ಹುತಾತ್ಮ ಯೋಧರ ನಿಧಿ ಸ್ಥಾಪಿಸಲಾಗುವುದು ಎಂದು ತರಳಬಾಳು ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಘೋಷಿಸಿದ್ದಾರೆ.

Advertisement

ಸಿರಿಗೆರೆ ಗ್ರಾಪಂ ನೂತನ ಕಟ್ಟಡ ಗ್ರಾಮಸೌಧ’ ಶನಿವಾರ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಹಾಸನ ಜಿಲ್ಲೆ ಹಳೆಬೀಡು ಪಟ್ಟಣದಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವ ಸಂದರ್ಭ 11 ಹುತಾತ್ಮ ಯೋಧರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಾಗಿದೆ.

ಹಳೆಬೀಡಿನಲ್ಲಿ ಹುಣ್ಣಿಮೆ ಮಹೋತ್ಸವ ಆರಂಭವಾದ ಎರಡು ದಿನಗಳಲ್ಲಿ ಹಲವು ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ಮೃತ ಯೋಧರ ಮಾಹಿತಿ ಸಂಗ್ರಹಿಸಿ ಅವರ ಕುಟುಂಬ ವರ್ಗದವರನ್ನು ಕರೆಸಿ ಆರ್ಥಿಕ ನೆರವು ನೀಡಲಾಯಿತು. ಆಗ ಬರಲು ಸಾಧ್ಯವಾಗದ ಹಲವು ಕುಟುಂಬಗಳನ್ನು ಮತ್ತೆ ಆಹ್ವಾನಿಸಿ ನೆರವು ನೀಡಲಾಗುವುದು. ಈ ಕಾರ್ಯವನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗುವ ಉದ್ದೇಶದಿಂದ ಹುತಾತ್ಮ ಯೋಧರ ನಿಧಿ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next