ಶನಿವಾರ ಹೆಮ್ಮಾಡಿಯ ಆರ್. ಆರ್, ಕನ್ವೆನ್ಶನ್ ಹಾಲ್ನಲ್ಲಿ ಹೆಮ್ಮಾಡಿ ಹಾಗೂ ಕಟ್ಬೆಲೂ¤ರು ಗ್ರಾ.ಪಂ., ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ (ಐಟಿಡಿಪಿ) ಸಹಯೋಗದಲ್ಲಿ ಕೊರಗ ಸಮುದಾಯ ಯುವ ಜನತೆಗೆ ಶೈಕ್ಷಣಿಕ, ಆರೋಗ್ಯ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Advertisement
ಕೊರಗರ ಜೀವನ ಮಟ್ಟ ಸುಧಾರಣೆಗೆ ಕಾಲನಿಯಲ್ಲೇ ಪ್ರತಿ ವಾರ ಸಭೆ ನಡೆಸಿ, ಅಲ್ಲಿ ನಿಮ್ಮ ಸಮಸ್ಯೆಗಳನ್ನು ಪ್ರಸ್ತಾವಿಸಿ. 2 ತಿಂಗಳಿಗೊಮ್ಮೆ ಪಂಚಾಯತ್ ಮಟ್ಟದಲ್ಲಿ ಸಭೆಯಾಗಲಿ. ಅಲ್ಲಿ ಪ್ರಸ್ತಾವವಾದ ವಿಚಾರಗಳನ್ನು ಐಟಿಡಿಪಿ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಲು ಪ್ರಯತ್ನಿಸಿ ಎಂದ ಡಿಸಿ, ಅರ್ಧದದಲ್ಲೇ ವಿದ್ಯಾಭ್ಯಾಸ ಮುಗಿಸಿದವರಿಗೆ ಕೊರಗರ ಕಾಲನಿಯಲ್ಲಿಯೇ ಕಲಿಯಲು ಇಲಾಖೆ ಯಿಂದಲೇ ಅವಕಾಶ ಮಾಡಿಕೊಡ ಲಾಗುವುದು ಎಂದವರು ಹೇಳಿದರು.
ಉದ್ಘಾಟಿಸಿದ ಜಿ.ಪಂ. ಸದಸ್ಯೆ ಶೋಭಾ ಜಿ. ಪುತ್ರನ್ ಮಾತನಾಡಿ, ಕೊರಗರಿಗೆ ಸಾಕಷ್ಟು ಸವಲತ್ತುಗಳಿದ್ದರೂ ಅದನ್ನು ಪಡೆದುಕೊಳ್ಳುವಲ್ಲಿ ಹಿಂದುಳಿ ಯುತ್ತಿದ್ದಾರೆ. ಮಾಹಿತಿಯ ಕೊರತೆ ಯಿದ್ದು, ಶಿಕ್ಷಣದಿಂದ ಇದಕ್ಕೆಲ್ಲ ಪರಿಹಾರ ಸಿಗಲು ಸಾಧ್ಯ ಎಂದರು. ತಾ.ಪಂ. ಸದಸ್ಯ ರಾಜು ದೇವಾಡಿಗ, ಐಟಿಡಿಪಿ ಅಧಿಕಾರಿ ವಿಶ್ವನಾಥ ಮಾತನಾಡಿ ದರು. ಕಟ್ಬೆಲೂ¤ರು ಗ್ರಾ.ಪಂ. ಅಧ್ಯಕ್ಷೆ ಅನಸೂಯಾ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.
Related Articles
Advertisement
6 ತಿಂಗಳಾದರೂ ಸಿಗದ ಪಿಎಫ್ಕುಂದಾಪುರ ಪುರಸಭೆಯ ಪೌರ ಕಾರ್ಮಿಕ ದಿನೇಶ್ ಅವರು 6 ತಿಂಗಳ ಹಿಂದೆ ಕಸ ಸಾಗಾಟದ ವಾಹನ ಪಲ್ಟಿಯಾಗಿ ಮೃತಪಟ್ಟಿದ್ದು, ಆದರೆ ಈವರೆಗೆ ಭವಿಷ್ಯ ನಿಧಿ (ಪಿಎಫ್) ಸಿಕ್ಕಿಲ್ಲ. ಅದಲ್ಲದೆ ವಾಹನದ ವಿಮೆ ಕೂಡ ಸಿಕ್ಕಿಲ್ಲ ಎಂದು ಅವರ ಮನೆಯವರು ಡಿಸಿ ಗಮನಕ್ಕೆ ತಂದರು. ಇದಕ್ಕುತ್ತರಿಸಿದ ಡಿಸಿ, ತಾಂತ್ರಿಕ ಕಾರಣದಿಂದ ಪಿಎಫ್ ಸಿಗುವಲ್ಲಿ ಸ್ವಲ್ಪ ತಡವಾಗಿದೆ. ಶೀಘ್ರ ಸಿಗುವ ವ್ಯವಸ್ಥೆ ಮಾಡಲಾಗುವುದು ಎಂದರು. ಈ ವೇಳೆ ಪಲ್ಟಿಯಾದ ವಾಹನಕ್ಕೆ ಇನ್ಶೂರೆನ್ಸ್ ಮಾಡಿಸಿರಲಿಲ್ಲ. ಇದಕ್ಕೆ ಯಾರು ಹೊಣೆ ಎಂದು ಸಭೆಯಲ್ಲಿ ಕೊರಗ ಮುಖಂಡರು ಪ್ರಶ್ನಿಸಿದರು. ಬುಟ್ಟಿಗೆ ಬೇಡಿಕೆಯಿದೆ
ಕೊರಗರ ಮೂಲ ಕಸುಬಾಗಿರುವ ಬುಟ್ಟಿ ನೇಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ವಿದ್ಯಾವಂತರಾದರೂ ಮೂಲ ಕಸುಬನ್ನು ನಿರ್ಲಕ್ಷಿಸಬಾರದು. ನಿಮ್ಮ ಬುಟ್ಟಿಗೆ ಈಗಲೂ ಬಹಳಷ್ಟು ಬೇಡಿಕೆಯಿದೆ. ಅದಕ್ಕೂ ಉತ್ತಮ ಮಾರುಕಟ್ಟೆ ಕಲ್ಪಿಸಿ ಕೊಡುವ ವ್ಯವಸ್ಥೆ ಮಾಡಲಾಗುವುದು. ಬುಟ್ಟಿ ನೇಯುವಿಕೆ ಗೊತ್ತಿಲ್ಲದವರಿಗೆ ತರಬೇತಿ ಕೂಡ ಇಲಾಖೆಯಿಂದಲೇ ನೀಡಲಾಗುವುದು.
– ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಜಿಲ್ಲಾಧಿಕಾರಿ ಸರಕಾರ, ಸಮುದಾಯ, ಸಮಾಜ…
ಕೊರಗ ಸಮುದಾಯದಲ್ಲಿ ವಿದ್ಯಾವಂತರ ಸಂಖ್ಯೆ ಬಹಳಷ್ಟು ಕಡಿಮೆಯಿದೆ. ಶಿಕ್ಷಣ ಪಡೆದವರು ಬಾಕಿ ಉಳಿದವರಿಗೆ ಮಾಹಿತಿ, ಅರಿವು ಮೂಡಿಸುವ ಕೆಲಸ ಮಾಡಬೇಕು. ಆಗ ಮಾತ್ರ ನಿಮ್ಮ ಸಮುದಾಯ ಮುಂದೆ ಬರಲು ಸಾಧ್ಯ. ಕೊರಗ ಜನರಲ್ಲಿ ಅಪೌಷ್ಟಿಕತೆ, ಶಿಶು ಮರಣ ಹೆಚ್ಚಾಗಿದ್ದು, ಆರೋಗ್ಯ ಕಾಳಜಿ ಕಡಿಮೆಯಿದೆ. ಆದರೆ ಕೊರಗರು ದುರ್ಬಲರಲ್ಲ. ನಿಮ್ಮೊಂದಿಗೆ ಸರಕಾರ, ಸಮುದಾಯ ಹಾಗೂ ಸಮಾಜವಿದೆ.
– ಜಯಪ್ರಕಾಶ್ ಶೆಟ್ಟಿ ,
ಉಪನ್ಯಾಸಕರು, ತೆಂಕನಿಡಿಯೂರು ಪ್ರಥಮ ದರ್ಜೆ ಕಾಲೇಜು