Advertisement

ಮಾಸ್ತಿಯಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸಿ

06:03 PM Jun 06, 2022 | Team Udayavani |

ಮಾಸ್ತಿ: ಕನ್ನಡದ ಆಸ್ತಿ ಮೆರು ಸಾಹಿತಿ ಡಾ. ಮಾಸ್ತಿ ವೆಂಕಟೇಶ್‌ ಅಯ್ನಾಂಗರ್‌ ಅವರ ಜನ್ಮ ದಿನವನ್ನು ಪ್ರತೀ ವರ್ಷ ಜೂ. 6 ರಂದು ಮಾಸ್ತಿ ಗ್ರಾಮದಲ್ಲಿ ಆಚರಣೆ ಮಾಡಿ ಕೈತೊಳೆದುಕೊಳ್ಳುವ ಡಾ.ಮಾಸ್ತಿ ಟ್ರಸ್ಟ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಾಹಿತ್ಯಾಸಕ್ತರನ್ನು- ಕನ್ನಡಾಭಿಮಾನಿಗಳಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ದಿರುವುದು ಬೇಸರದ ಸಂಗತಿಯಾಗಿದೆ.

Advertisement

ಸಣ್ಣ ಕಥೆಗಳ ಜನಕ, ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರುರಾದ ಡಾ. ಮಾಸ್ತಿ ಅವರು ಹುಟ್ಟಿದ್ದು ತಾಯಿಯ ತವರೂರಾದ ಹುಂಗೇನಹಳ್ಳಿಯಾದರೂ ಆಡಿ ಬೆಳೆದಿದ್ದು ಮಾತ್ರ ಮಾಸ್ತಿಯಲ್ಲಿ ಆದರೆ, ಡಾ.ಮಾಸ್ತಿ ಅವರು ತಮ್ಮ ಜೀವನವನ್ನು ಬಹುತೇಕ ದಿನಗಳು ಬೆಂಗಳೂರಿನಲ್ಲಿದ್ದರು.

ಅಧ್ಯಯನ ಕೇಂದ್ರಕ್ಕೆ ಒತ್ತಾಯ: ಮಾಸ್ತಿ ಗ್ರಾಮದಲ್ಲಿ ಅವರ ಮನೆಯನ್ನು ಸರ್ಕಾರ ಪುರಾತನ ಶೆ„ಲಿಯಲ್ಲಿ ನವೀಕರಿಸಿ ಡಾ. ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ಪೆರಿಯಾತ್‌ ಗ್ರಂಥಾಲಯವನ್ನಾಗಿ ಅಭಿವೃದ್ಧಿಪಡಿಸಿ ಸುಮಾರು 13 ವರ್ಷಗಳು ಕಳೆದಿದೆ. ಪ್ರಸ್ತುತ ಅದರಲ್ಲಿ ಸುಮಾರು 27 ಸಾವಿರಕ್ಕೂ ಹೆಚ್ಚು ಕಥೆ, ಕಾದಂಬರಿಗಳು, ಸಣ್ಣ ಕಥೆಗಳು ಸೇರಿದಂತೆ ಸಾಹಿತ್ಯ ಪುಸ್ತಕಗಳಿವೆ. ಪ್ರತಿದಿನ ಸಾಹಿತ್ಯಾಸಕ್ತರು ಆಗಮಿಸಿ ಗ್ರಂಥಗಳ ಅಧ್ಯಯನದಲ್ಲಿ ತೊಡಗಿರುತ್ತಾರೆ. ಹೀಗಾಗಿ ಸರ್ಕಾರ ಡಾ. ಮಾಸ್ತಿ ಪೆರಿಯಾತ್‌ ಗ್ರಂಥಾಲಯವು ಅದ್ಯಯನ ಕೇಂದ್ರವಾಗಿ ರೂಪಿಸಬೇಕು ಎಂಬುದು ಸಾಹಿತ್ಯಾಸಕ್ತರ ಒತ್ತಾಯವಾಗಿದೆ.

ಮಾಸ್ತಿಯಲ್ಲಿ ಕಾರ್ಯಕ್ರಮಕ್ಕೆ ಭವನ ನಿರ್ಮಿಸಿ: ಮಾಸ್ತಿ ಗ್ರಾಮದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಾನೀಯರು ಹಾಗೂ ನಾಡು ನುಡಿಗಾಗಿ ಶ್ರಮಿಸಿದವರ ಹೆಸರಲ್ಲಿ ಕಾರ್ಯಕ್ರಮ ನಡೆಸಬೇಕು. ಮಾಸ್ತಿ ಅವರ ಬಗ್ಗೆ ಅಧ್ಯಾಯನ ಮಾಡಲು ಬಯಸುವವರಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳು ಹಾಗೂ ವಿಶ್ರಾಂತಿ ಗೃಹಗಳನ್ನು ನಿರ್ಮಿಸಬೇಕು. ಡಾ. ಮಾಸ್ತಿ ಟ್ರಸ್ಟ್‌ ಕೇವಲ ಬೆಂಗಳೂರಿಗೆ ಸೀಮಿತವಾಗಬಾರದು, ಮಾಸ್ತಿ ಪ್ರಶಸ್ತಿ ಪ್ರಧಾನ ಮಾಸ್ತಿಯಲ್ಲೇ ನಡೆಸಬೇಕು. ಡಾ.ಮಾಸ್ತಿ ಅವರು ಬಳಸುತ್ತಿದ್ದ ವಸ್ತುಗಳನ್ನು ಸ್ಮಾರಕ ಭವನದಲ್ಲಿ ಪ್ರದರ್ಶನಕ್ಕಿಡಬೇಕು ಗ್ರಾಮದಲ್ಲಿ ಡಾ.ಮಾಸ್ತಿ ಭವನ ನಿರ್ಮಾಣ ಮಾಡಬೇಕು ಎಂಬುವುದೇ ಸಾಹಿತ್ಯಾಭಿಮಾನಿಗಳ ಆಶಯವಾಗಿದೆ.

ಮಾಸ್ತಿ ಜನ್ಮಸ್ಥಳ ಅಭಿವೃದ್ಧಿ: ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ 2015-16ನೇ ಸಾಲಿನಲ್ಲಿ ಮಂಡಿಸಿದ್ದ ರಾಜ್ಯ ಬಜೆಟ್‌ನಲ್ಲಿ ಡಾ.ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ಅವರ ಜನ್ಮ ಸ್ಥಳ ಅಥವಾ ಅವರ ಮನೆಯನ್ನು ಕವಿಶೈಲ ಮಾದರಿಯಲ್ಲಿ ಅಭಿವೃದ್ಧಿಪಡಿಸಲು 1 ಕೋಟಿ ರೂ. ಗಳನ್ನು ಮೀಸಲಿರಿಸಿದ್ದರು. ಆದರೆ, ಇದುವರೆವಿಗೂ ಕಾರ್ಯರೂಪಕ್ಕೆ ಬಂದಿಲ್ಲ ಎನ್ನಲಾಗಿದೆ. ಡಾ.ಮಾಸ್ತಿ ಜನ್ಮ ಸ್ಥಳ ಶಿವಾರಪಟ್ಟಣವಾದರೂ ಅವರ ತವರೂರು
ಮಾತ್ರ ಮಾಸ್ತಿಯಾಗಿದ್ದು, ಮಾಸ್ತಿಯವರ ಮನೆ ಚಿಕ್ಕದಾಗಿದ್ದು, ಅಭಿವೃದ್ಧಿಯಾಗಬೇಕಿದೆ. ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತಂದು ಜಮೀನು ಮಂಜೂರು ಮಾಡಿಸಿ ಮಾಸ್ತಿಯಲ್ಲೇ ಕವಿಶೈಲ ಮಾದರಿಯ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಒತ್ತಾಯಿಸಿದರು.

Advertisement

ಡಾ.ಮಾಸ್ತಿ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಹಿರಿಯ ಸಾಹಿತಿ ಮಾವಿನಕೆರೆ ರಂಗನಾಥನ್‌ ಶ್ರಮದಿಂದಾಗಿ ಟ್ರಸ್ಟ್‌ನ ಮಹಾತ್ವಾಕಾಂಕ್ಷೆಯಾಗಿರುವ ಮಾಸ್ತಿ ಭವನ ನಿರ್ಮಾಣಕ್ಕೆ ಈಗಾಗಲೆ ಬೆಂಗಳೂರಿನ ಜ್ಞಾನಜೋತಿ ಬಡಾವಣೆಯಲ್ಲಿ ಮುಖ್ಯಮಂತ್ರಿ ಬಸವರಾಜ್‌ ಮೊಮ್ಮಾಯಿ ಅವರು ಶಿಲಾನ್ಯಾಸ ನೆರವೇರಿಸಿದ್ದಾರೆ.

ಡಾ.ಮಾಸ್ತಿ ಅವರ ಕಾರ್ಯಕ್ರಮಗಳು ಕೋಲಾರ ಜಿಲ್ಲೆಗೂ ಪಸರಿಸಬೇಕು. ಮಾಸ್ತಿಯವರ ಸಾಹಿತ್ಯವನ್ನು ಮುಂದಿನ ಪೀಳಿಗೆಗೂ ಉಳಿಸುವ ನಿಟ್ಟಿನಲ್ಲಿ ನಿರಂತರ ವಾಗಿ ಕಾರ್ಯಕ್ರಮಗಳನ್ನು ಕೊಡಿ ಎಂದು ಈಗಾಗಲೆ ಮಾಸ್ತಿ ಪ್ರತಿಷ್ಠಾನದೊಂದಿಗೆ ಚರ್ಚಿಸಲಾಗಿದೆ. ಕಸಾಪದಿಂದ ಕಾರ್ಯಕ್ರಮ ಮಾಡಲು ಕೇಳಲಾಗಿದೆ. ಕನಿಷ್ಠ ತಿಂಗಳಿಗೊಂದು ಸಾಹಿತ್ಯ ಕಾರ್ಯಕ್ರಮ ಹಮ್ಮಿಕೊಳ್ಳಬೇಕು.

●ಎನ್‌.ಬಿ.ಗೋಪಾಲ್‌ ಗೌಡ,
ಕಸಾಪ ಜಿಲ್ಲಾಧ್ಯಕ್ಷ

ಈಗಾಗಲೇ ಮಾಸ್ತಿ ಸಾಹಿತ್ಯ ಅಭಿಯಾನದ ಮೂಲಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ಸಾಹಿತ್ಯ ಪರಿಚಯಿಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯಕ್ರಮ ಗಳನ್ನು ಏರ್ಪಡಿಸಲಾಗುವುದು. ಹಂತ ಹಂತವಾಗಿ ಕಾರ್ಯಚಟುವಟಿಕೆಗಳನ್ನು ಕಾರ್ಯರೂಪಕ್ಕೆ ತರಲಾಗುವುದು.
●ಎನ್‌.ನರೇಂದ್ರಬಾಬು, ಡಾ.ಮಾಸ್ತಿ
ಟ್ರಸ್ಟ್‌ನ ಸದಸ್ಯ ಕಾರ್ಯದರ್ಶಿ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next