Advertisement

ಸುಸಜ್ಜಿತ ಪಾರ್ಕಿಂಗ್‌, ಬಯಲು ರಂಗಮಂದಿರ ವ್ಯವಸ್ಥೆ

01:37 AM Jun 09, 2019 | sudhir |

ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ಅಮ್ಮನವರ ಸನ್ನಿಧಿಯಲ್ಲಿ ಭಕ್ತರ ಸಂಖ್ಯೆ ದಿನದಿಂದ ದಿನೇ ಹೆಚ್ಚುತ್ತಿದ್ದು, ವಾಹನಗಳ ನಿಲುಗಡೆಗೆ ವಿಶಾಲವಾದ ವ್ಯವಸ್ಥೆಯನ್ನು ಮಾಡಲಾಗಿದೆ.

Advertisement

ಗಯಾಪದ ಕ್ಷೇತ್ರ ಪಿಂಡ ಪ್ರದಾನಕ್ಕೆ ಹೆಸರುವಾಸಿಯಾಗಿದ್ದು, ರಾಜ್ಯ ಹಾಗೂ ಹೊರ ರಾಜ್ಯಗಳ ಭಕ್ತರು ಇಲ್ಲಿಗೆ ಅಗಮಿಸುತ್ತಾರೆ. ಆದರೆ ಭಕ್ತರಿಗೆ ವಾಹನ ನಿಲುಗಡೆ ಹಾಗೂ ಇತರ ವ್ಯವಸ್ಥೆಗಳಿಗೆ ತೊಂದರೆಯಾಗುತ್ತಿತ್ತು. ಶ್ರೀ ದೇಗುಲದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಅಲಿಮರ್‌ ರಘುನಾಥ ರೈ, ಸಮಿತಿ ಸದಸ್ಯರಾದ ಕೆ. ರಾಧಾಕೃಷ್ಣ ನಾಯಕ್‌, ಕೃಷ್ಣರಾವ್‌, ಪ್ರಕಾಶ್‌ ರೈ, ಸೋಮನಾಥ್‌, ಕಾರ್ಯ ನಿರ್ವಹಣಾಧಿಕಾರಿ ಹರಿಶ್ಚಂದ್ರ ಕೆ., ವಿಶೇಷ ಸಮಿತಿ ಸಭೆಯನ್ನು ಕರೆದು ದೇಗುಲದ ಹೊರಾಂಗಣದಲ್ಲಿ ವಿಸ್ತಾರವಾದ ಪಾರ್ಕಿಂಗ್‌ ಅನ್ನು ನಿರ್ಮಿಸಿ ಅದಕ್ಕೆ ಬಿಳಿ ಬಣ್ಣದ ಲೈನ್‌ ಮಾರ್ಕ್‌ ಹಾಕುವ ಮೂಲಕ ಎಲ್ಲ ವಾಹನಗಳಿಗೆ ಸುಸಜ್ಜಿತ ಪಾರ್ಕಿಂಗ್‌ ನಿರ್ಮಿಸಿದ್ದಾರೆ. ಇದರಿಂದ ದೇಗುಲಕ್ಕೆ ಬರುವ ಭಕ್ತರಿಗೆ ಬಹಳ ಅನುಕೂಲವಾಗಿದೆ. ಅದರೊಂದಿಗೆ ಭಕ್ತರು ತಂಗಲು ಬಯಲು ರಂಗಮಂದಿರವನ್ನು ನಿರ್ಮಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next