Advertisement

ಪರಿಸರ ಸಂರಕ್ಷಣೆ ಎಂದರೆ ಮಾನವನ ಸಂರಕ್ಷಣೆ: ಸಾಣೇಹಳ್ಳಿ ಶ್ರೀ

06:54 AM Jun 06, 2020 | Suhan S |

ಹೊಸದುರ್ಗ: ಪರಿಸರ ಸಂರಕ್ಷಣೆ ಎಂದರೆ ಮಾನವನ ಸಂರಕ್ಷಣೆಯೇ ಆಗಿದೆ. ಮಳೆ, ಬೆಳೆ ಚನ್ನಾಗಿ ಆಗಬೇಕೆಂದರೆ ಪ್ರತಿಯೊಬ್ಬರೂ ವರ್ಷಕ್ಕೆ ಒಂದು ಗಿಡವನ್ನಾದರೂ ನೆಟ್ಟು ಬೆಳಸಲು ಮುಂದಾಗಬೇಕು ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯರು ಕರೆ ನೀಡಿದರು.

Advertisement

ತಾಲೂಕಿನ ಸಾಣೇಹಳ್ಳಿಯ ಶ್ರೀ ಮಠದ ಆವರಣದಲ್ಲಿ “ವಿಶ್ವ ಪರಿಸರ ದಿನಾಚರಣೆ’ಯ ಅಂಗವಾಗಿ ಸಸಿ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೋವಿಡ್ ಅವಧಿಯಲ್ಲಿ ಸಾಣೇಹಳ್ಳಿ ಶ್ರೀಮಠದ ಸಿಬ್ಬಂದಿ ಶ್ರೀಮಠದ ಅಂಗಳದಲ್ಲಿರುವ ಶಾಲಾ-ಕಾಲೇಜು, ಅತಿಥಿಗ್ರಹ, ವಿದ್ಯಾರ್ಥಿನಿಲಯ, ರಂಗಮಂದಿರ ಮುಂತಾದ ಕಟ್ಟಡಗಳ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಿದ್ದಾರೆ. ಕಳೆದ ನಾಲ್ಕಾರು ದಿನಗಳಿಂದ ಮಹಾಘನಿ, ಶ್ರೀಗಂಧ, ಮಾವು, ತೇಗ, ಬಿದಿರು, ಸಿಲ್ವರ್‌, ನುಗ್ಗೆ, ನೇರಳೆ, ಸೀತಾಫಲ, ಹತ್ತಿ, ಪೇರಲ, ಮುಂತಾದ ವಿವಿಧ ಜಾತಿಯ ಸುಮಾರು 1500 ಗಿಡಗಳನ್ನು ಶ್ರಮದಾನದ ಮೂಲಕ ನೆಟ್ಟಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next