Advertisement

ಪ್ರಾಥಮಿಕ ಶಾಲೆ ವಿದ್ಯಾರ್ಥಿಯ ಪರಿಸರ ಕಾಳಜಿ

04:54 PM Jan 26, 2021 | Team Udayavani |

ಲೋಕಾಪುರ: ಪರಿಸರ ರಕ್ಷಣೆ ಜವಾಬ್ದಾರಿಯನ್ನು ಪಟ್ಟಣದ ವೆಂಕಟೇಶನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವುದರ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾನೆ.

Advertisement

ಉತ್ತಮ ಪರಿಸರವಿಲ್ಲದೇ ಮನುಷ್ಯ ಬದುಕಲು ಸಾಧ್ಯವಿಲ್ಲ. ಪರಿಸರ ಉಳಿಸಿ-ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ 5ನೇ ತರಗತಿ ವಿದ್ಯಾರ್ಥಿ ಸುಜಿತ್‌ ಶ್ರೀಶೈಲ ಮಣ್ಣೂರ ಗಮನಸೆಳೆಯುವಂತಹ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾನೆ.
ವಿದ್ಯಾಗಮ ಯೋಜನೆ ಆರಂಭಗೊಂಡ ಬಳಿಕ ಸುಜಿತ್‌ ಪಠ್ಯದ ಜತೆಗೆ ಪರಿಸರ ಕಾಳಜಿ ಬೆಳೆಸಿಕೊಂಡು ಶಾಲಾ ಆವರಣದಲ್ಲಿ ಅಶೋಕ, ಬಾದಾಮ, ದಾಸವಾಳ, ಪೇಪರ್‌ ಪ್ಲಾವರ್‌, ಕಣಗಲಿ, ಮಲ್ಲಿಗೆ ಕಂಟಿ ಸೇರಿದಂತೆ 50 ಗಿಡಗಳ ಪಾಲನೆ ಮಾಡುತ್ತಿದ್ದಾನೆ. ಅನಗತ್ಯ ಕಾಲಹರಣ ಮಾಡುತ್ತಿರುವ ಇತರೆ ವಿದ್ಯಾರ್ಥಿಗಳಿಗೆ ಸುಜಿತ್‌ನ ಪರಿಸರ ಕಾಳಜಿ ಮಾದರಿಯಾಗಿದೆ. ಕಳೆದ ಒಂದು ವಾರದಿಂದ ಸುಜಿತ್‌ ಕಟ್ಟಿಗೆಯ ಎಳೆಯುವ ಗಾಡಿಯನ್ನು ತಯಾರಿಸಿ ಅದರಲ್ಲಿ ಮಣ್ಣಿನ ಚೀಲಗಳನ್ನು ಇಟ್ಟುಕೊಂಡು ಶಾಲೆ ಆವರಣದಲ್ಲಿರುವ ಸಸಿಗಳಿಗೆ ಮಣ್ಣು ಮತ್ತು ನೀರು ಹಾಕಿ ಸಸಿಗಳ ಪಾಲನೆ -ಪೋಷಣೆ ಮಾಡುತ್ತಿರುವುದು ವಿಶೇಷತೆಯಾಗಿದೆ.

ಶಾಲಾ ರಜೆ ಅವಧಿಯಲ್ಲಿ ಪಾಠದ ಅಭ್ಯಾಸದ ಜತೆ ಶಿಕ್ಷಕರ ಮಾರ್ಗದರ್ಶನದಲ್ಲಿ ಶಾಲೆ ಆವರಣ ಸುತ್ತಲು ಸಸಿ ಬೆಳೆಸಿ ರಕ್ಷಣೆ
ಮಾಡುವುದರಲ್ಲಿ ಶಿಕ್ಷಕರ ಮೆಚ್ಚುಗೆ ಪಡೆದು ಸೈ ಎನಿಸಿಕೊಂಡಿದ್ದಾನೆ. ಶಾಲೆಯ ಸುತ್ತಲು ಉತ್ತಮ ಪರಿಸರ ನಿರ್ಮಾಣ ಮಾಡಲು ಪಣ ತೊಟ್ಟಿರುವ ಸುಜಿತ್‌ನ ಜಾಣತನದ ದಿಟ್ಟ ಹೆಜ್ಜೆಯ ಕೆಲಸ ಕಾರ್ಯಗಳಿಗೆ ಶಿಕ್ಷಕ ಬಿ.ಜಿ. ಜೋಶಿ, ವೆಂಕಟೇಶ ನಗರದ ನಿವಾಸಿಗಳು ಹಾಗೂ ಶಿಕ್ಷಕವೃಂದ ಸಂತಸ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

– ಸಲೀಮ ಐ. ಕೊಪ್ಪದ

Advertisement

Udayavani is now on Telegram. Click here to join our channel and stay updated with the latest news.

Next