Advertisement

ದೀಪಾವಳಿಗೆ ಇದೆ ಪಟಾಕಿ 

12:48 AM Oct 29, 2021 | Team Udayavani |

ಬೆಂಗಳೂರು: ದೀಪಾವಳಿಗೆ ದೀಪ ಹಚ್ಚುವುದು, ಪಟಾಕಿ ಹೊಡೆಯು ವುದು ಹಲವಾರು ವರ್ಷಗಳಿಂದ ನಡೆದು ಬಂದಿದೆ. ಪಟಾಕಿ ತರದಿದ್ದರೆ ಮನೆಯಲ್ಲಿ ಮಕ್ಕಳು ಕೇಳುತ್ತಾರೆಯೇ? ಸಾಧ್ಯವಾದಷ್ಟು ಕಡಿಮೆ ಪಟಾಕಿ ಹೊಡೆಯಬೇಕಷ್ಟೆ…

Advertisement

– ಇದು ಪರಿಸರ ಖಾತೆಯ ಸಚಿವ ಆನಂದ್‌ ಸಿಂಗ್‌ ಮಾತು. ದೀಪಾವಳಿಯಲ್ಲಿ ಪಟಾಕಿ ಮಾರಾಟಕ್ಕೆ ಅನುಮತಿ ನೀಡುವ ಸಂಬಂಧ ಇರುವ ಗೊಂದಲದ ಬಗ್ಗೆ ಕೇಳಿ ದಾಗ ಪ್ರತಿಕ್ರಿಯಿಸಿದ ಅವರು, ಪರೋಕ್ಷ ವಾಗಿ ಹಸುರು ನಿಶಾನೆ ನೀಡಿದರು.

ದೀಪಾವಳಿ ನಮ್ಮ ಸಾಂಪ್ರದಾಯಿಕ ಹಬ್ಬ. ಈ ಹಬ್ಬದಲ್ಲಿ ದೀಪ ಹಚ್ಚಬೇಕು, ಪಟಾಕಿ ಹೊಡೆಯಬೇಕು. ಪಟಾಕಿ ಬೇಡ ಎಂದರೆ ಮಕ್ಕಳು ಕೇಳುವುದಿಲ್ಲ. ಈ ಸಂಪ್ರದಾಯವನ್ನು ಏಕಾಏಕಿ ನಿಲ್ಲಿ ಸಲು ಸಾಧ್ಯವಿಲ್ಲ. ಸಾಧ್ಯವಾದಷ್ಟು ಕಡಿಮೆ ಪಟಾಕಿ ಬಿಡಬೇಕು ಮತ್ತು ಎಚ್ಚರಿಕೆಯಿಂದ ಸಿಡಿಸಬೇಕು. ಹಬ್ಬವನ್ನು ಸರಳವಾಗಿ ಆಚರಿಸಬೇಕು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next