Advertisement

ಮಾನಸ ದೇವಿ ದೇಗುಲ ಅತಿಕ್ರಮಣ ತೆರವಿಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಆದೇಶ

10:10 PM Jul 10, 2022 | Team Udayavani |

ನವದೆಹಲಿ: ಉತ್ತರಾಖಂಡದ ಹರಿದ್ವಾರದಲ್ಲಿರುವ ಮಾನಸ ದೇವಿ ದೇಗುಲದ ಸಂಕೀರ್ಣದ ಸುತ್ತಲಿನ ಪ್ರದೇಶಗಳಲ್ಲಿ ಅತಿಕ್ರಮಣ ಮಾಡಿಕೊಳ್ಳಲಾಗಿರುವ ಕಟ್ಟಡಗಳನ್ನು ತೆರವುಗೊಳಿಸಲು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಹರಿದ್ವಾರದ ಆಡಳಿತಕ್ಕೆ ಸೂಚಿಸಿದ್ದಾರೆ.

Advertisement

ಈ ಪ್ರದೇಶದಲ್ಲಿನ ಅತಿಕ್ರಮಣದಿಂದಾಗಿ ದೇಗುಲದ ಬಳಿ ತ್ಯಾಜ್ಯ ವಿಲೇವಾರಿ ಇಲ್ಲವಾಗಿದೆ. ಸ್ವತ್ಛತೆಯ ದೃಷ್ಟಿಯಿಂದ ಅತಿಕ್ರಮಣ ತಡೆ ಅವಶ್ಯವೆಂದು ಮಂಡಳಿ ತಯಾರಿಸಿರುವ ಸಮಿತಿಯು ವರದಿ ಕೊಟ್ಟಿದೆ. ಅದೇ ಹಿನ್ನೆಲೆ ಇಂತಹ ಸೂಚನೆ ನೀಡಲಾಗಿದೆ.

ಸ್ಥಳದಲ್ಲಿರುವ ನೈಸರ್ಗಿಕ ಜಲ ಮೂಲಗಳನ್ನು ಅತಿಕ್ರಮಗಳಿಂದ ಕಾಪಾಡಿಕೊಳ್ಳಬೇಕೆಂದು ಸೂಚನೆಯಲ್ಲಿ ತಿಳಿಸಲಾಗಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next