Advertisement

ಎಣ್ಣೆಹೊಳೆ: ರಸ್ತೆ ವಿಸ್ತರಣೆ ಕಾಮಗಾರಿ ಆರಂಭ

01:00 AM Feb 20, 2019 | Harsha Rao |

ಅಜೆಕಾರು: ಹಿರ್ಗಾನ ಗ್ರಾ.ಪಂ. ಹಾಗೂ ಮರ್ಣೆ ಗ್ರಾ.ಪಂ.ವ್ಯಾಪ್ತಿಯ ತೀವ್ರ ಅಪಾಯಕಾರಿ ರಸ್ತೆ ತಿರುವನ್ನು ಸರಿಗೊಳಿಸಿ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿ ಪ್ರಾರಂಭಗೊಂಡಿದೆ.

Advertisement

ಹಲವಾರು ವರ್ಷಗಳಿಂದ ನಿರಂತರವಾಗಿ ಅಪಘಾತ ನಡೆಯುತ್ತಿದ್ದ ಎಣ್ಣೆಹೊಳೆ ನೆಲ್ಲಿಕಟ್ಟೆ ತಿರುವು ಹಾಗೂ ಎಣ್ಣೆಹೊಳೆ ಪಡ್ಡೆಲ್‌ಮಾರ್‌ ತಿರುವುಗಳಲ್ಲಿ ರಸ್ತೆ ಯನ್ನು ಅಗಲೀಕರಣಗೊಳಿಸಿ ಅಭಿವೃದ್ಧಿª ಗೊಳಿಸಲಾಗುತ್ತಿದೆ. ಎರಡೂ ಅಪಾಯಕಾರಿ ತಿರುವುಗಳನ್ನು ಅಭಿವೃದ್ಧಿಪಡಿಸಿ ನಿರಂತರ ನಡೆಯುವ ಅಪಘಾತ ತಡೆಯುವಂತೆ ಶಾಸಕ ಸುನಿಲ್‌ ಕುಮಾರ್‌ರವರಿಗೆ ಸ್ಥಳೀಯ ಪಂಚಾಯತ್‌ ಸದಸ್ಯರು ಹಾಗೂ ಗ್ರಾಮಸ್ಥರು ಮನವಿ ಮಾಡಿದ್ದರು.

ಮನವಿಗೆ ಸ್ಪಂದಿಸಿದ ಶಾಸಕರು ಎರಡೂ ತಿರುವುಗಳಿಗೆ ತಲಾ 1.75 ಕೋಟಿ ರೂ. ಅನುದಾನ ಒದಗಿಸಿದ್ದು ಇದೀಗ ತಿರುವನ್ನು ಸರಿಗೊಳಿಸಿ ರಸ್ತೆ ಅಭಿವದ್ಧಿಯ ಕಾಮಗಾರಿ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next