Advertisement

ಜಾರಿಗೆಕಟ್ಟೆ ಜಂಕ್ಷನ್‌ ಬಸ್‌ ನಿಲ್ದಾಣ ತುಂಬ ನೀರು: ಪ್ರಯಾಣಿಕರ ಗೋಳು!

10:26 PM Jul 14, 2019 | Team Udayavani |

ಬೆಳ್ಮಣ್‌: ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಮುಂಡ್ಕೂರು ಜಾರಿಗೆಕಟ್ಟೆ ಜಂಕ್ಷನ್‌ನ ಬಸ್ಸು ನಿಲ್ದಾಣದ ಮುಂಭಾಗ ನಿರಂತರವಾಗಿ ಜಲಾವೃತಗೊಳ್ಳುತ್ತಿದ್ದು ಪ್ರಯಾಣಿಕರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.

Advertisement

ಜೋರಾಗಿ ಮಳೆ ಬಂದಾಗ ಬಸ್‌ ನಿಲ್ದಾಣದ ಎದುರು ಕೆರೆಯಂತಾಗುತ್ತದೆ. ಇದರಿಂದ ಬಸ್‌ ನಿಲ್ದಾಣಕ್ಕೆ ಹೋಗುವುದೇ ಸಮಸ್ಯೆಯಾಗಿದೆ.

ಪ್ರಮುಖ ಜಂಕ್ಷನ್‌

ಈ ಜಾರಿಗೆಕಟ್ಟೆ ಜಂಕ್ಷನ್‌ನಲ್ಲಿ ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಜನರ ಓಡಾಟವಿರುತ್ತದೆ. ಮೂಡಬಿದ್ರೆ, ಉಡುಪಿ, ಬೆಳ್ಮಣ್‌, ಕಾರ್ಕಳ, ಕಿನ್ನಿಗೋಳಿ, ಕಟೀಲು, ಮೂಲ್ಕಿ ಹಳೆಯಂಗಡಿ, ಮಂಗಳೂರು, ಬಜಪೆ ಕಡೆ ಸಂಚರಿಸುವ ಪ್ರಯಾಣಿಕರು ಈ ಜಂಕ್ಷನ್‌ ಮೂಲಕವೇ ಬಸ್ಸುಗಳನ್ನು ಬದಲಾಯಿಸಬೇಕು. ವಿದ್ಯಾರ್ಥಿಗಳೂ ಅತ್ಯಧಿಕ ಸಂಖ್ಯೆಯಲ್ಲಿ ಈ ಭಾಗದಿಂದ ಸಂಚರಿಸುತ್ತಿದ್ದು, ನಿರಂತರ ಮಳೆಯ ಸಂದರ್ಭ ಬಸ್ಸು ತಂಗುದಾಣ ಬಳಕೆಗೆ ಸಿಗದಂತಾಗಿದೆ.

ಸಮರ್ಪಕ ಚರಂಡಿಯಿಲ್ಲ

Advertisement

ಮಳೆ ನೀರು ಹರಿಯಲು ಸಮರ್ಪಕ ಚರಂಡಿಯಿಲ್ಲ. ಜತೆಗೆ ತಂಗುದಾಣದ ಎದುರು ತಗ್ಗು ಪ್ರದೇಶವಿದೆ. ಇದರಿಂದ ನೀರು ಹರಿಯದೆ ಸಮಸ್ಯೆಯಾಗುತ್ತದೆ. ಕೂಡಲೇ ಮುಂಡ್ಕೂರು ಗ್ರಾ.ಪಂ. ಇಲ್ಲಿನ ಚರಂಡಿ ಸಮಸ್ಯೆ ಸರಿಪಡಿಸಬೇಕೆನ್ನುವುದು ಜನರ ಆಗ್ರಹವಾಗಿದೆ.

ತಾತ್ಕಾಲಿಕ ಕ್ರಮ

ಜಾರಿಗೆಕಟ್ಟೆ, ಪಂಚಾಯತ್‌ ವತಿಯಿಂದ ಸಾಧ್ಯವಾದಷ್ಟು ಪ್ರಯತ್ನಿಸುತ್ತೇವೆ.ಮೋರಿಯ ಅಗತ್ಯ ಇದ್ದಲ್ಲಿ ಇತರ ಇಲಾಖೆಯ ನೆರವು ಪಡೆಯಲಾಗುವುದು. ಅಲ್ಲಿವರೆಗೆ ತಾತ್ಕಾಲಿಕ ಕ್ರಮ ಕೈಗೊಳ್ಳಲಾಗುವುದು. -ಶಶಿಧರ ಆಚಾರ್ಯ, ಮುಂಡ್ಕೂರು ಗ್ರಾ.ಪಂ. ಪಿಡಿಒ

ಕ್ರಮ ಕೈಗೊಳ್ಳಬೇಕು

ಜಾರಿಗೆಕಟ್ಟೆ ಬಸ್ಸು ತಂಗುದಾಣದ ಎದರು ನೀರು ನಿಂತ ಪರಿಣಾಮ ಪ್ರಯಾಣಿಕರಿಗೆ ತೊಂದರೆಯಾಗಿದೆ. ಕೂಡಲೇ ಪಂಚಾಯತ್‌ ಚರಂಡಿ ದುರಸ್ತಿ ಪಡಿಸಿ ಕ್ರಮ ಕೈಗೊಳ್ಳಬೇಕು.
– ನೆಲ್ಸನ್‌ ಡಿ’ಸೋಜಾ, ಸ್ಥಳೀಯರು
Advertisement

Udayavani is now on Telegram. Click here to join our channel and stay updated with the latest news.

Next