Advertisement

ಸರ್‌. ಎಂ. ವಿಶ್ವೇಶ್ವರಯ್ಯ ಕೊಡುಗೆ ಅಪಾರ: ಪವನ್‌

07:15 PM Sep 16, 2020 | Suhan S |

ಮೊಳಕಾಲ್ಮೂರು: ಕನ್ನಂಬಾಡಿ ಅಣೆಕಟ್ಟನ್ನು ನಿರ್ಮಾಣಕ್ಕೆ ಅಂದಿನ ಅಭಿಯಂತರರಾದ ಭಾರತ ರತ್ನ ಸರ್‌.ಎಂ. ವಿಶ್ವೇಶ್ವರಯ್ಯ ಶ್ರಮಿಸಿದರು. ಗುಣಮಟ್ಟದ ಕಾಮಗಾರಿ ಕೈಗೊಂಡು ವಿಶ್ವ ಖ್ಯಾತಿ ಗಳಿಸಿದರು ಎಂದು ಕಿರಿಯ ಸಹಾಯಕ ಅಭಿಯಂತರ ಪವನ್‌ ಹೇಳಿದರು.

Advertisement

ಪಟ್ಟಣದ ಜಿಪಂ ಕಾರ್ಯಪಾಲಕ ಇಂಜಿನಿಯರ್‌ರವರ ಕಾರ್ಯಾಲಯದಲ್ಲಿ ನಡೆದ ಇಂಜಿನಿಯರ್‌ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಶ್ವದ ಗಮನಸೆಳೆದಿರುವ ಕೃಷ್ಣರಾಜಸಾಗರ ಆಣೆಕಟ್ಟೆಯನ್ನು ನಿರ್ಮಿಸಿದರು. ಆ ಭಾಗದ ರೈತರು ಹಾಗೂಪ್ರತಿಯೊಬ್ಬ ನಾಗರಿಕರು ಅಭಿವೃದ್ಧಿಯತ್ತ ಸಾಗಲು ಸರ್‌ ಎಂ. ವಿಶ್ವೇಶ್ವರಯ್ಯನವರು ಉತ್ತಮ ಗುಣಮಟ್ಟದ ಕಾಮಗಾರಿಯನ್ನು ನಿರ್ಮಿಸಿ ಆಭಾಗದ ಜನತೆಗೆ ಆಶಾ ಜ್ಯೋತಿಯಾಗಿದ್ದಾರೆ. ಇವರ ಆದರ್ಶ ಗುಣಗಳನ್ನು ಪಾಲಿಸಿ ಕೀರ್ತಿ ಗಳಿಸಬೇಕು. ರಾಜ್ಯ ಹಾಗೂ ದೇಶದಾದ್ಯಂತ ಇಂಜಿನಿಯರ್‌ಗಳು ಹಲವಾರು ಆಣೆಕಟ್ಟೆಗಳುಹಾಗೂ ಬೃಹತ್‌ ವಿನ್ಯಾಸದ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ದೇಶವನ್ನು ಅಭಿವೃದ್ಧಿಯತ್ತಕೊಂಡೊಯ್ಯುವಲ್ಲಿ ಇಂಜಿಯರ್‌ಗಳ ಪಾತ್ರ ಮಹತ್ವದ್ದಾಗಿದೆ ಎಂದರು.

ಈ ಸಂದರ್ಭದಲ್ಲಿ ಸರ್‌.ಎಂ. ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಸಹಾಯಕ ಅಭಿಯಂತರರಾದ ಕೆ.ಪಿ. ತಿಪ್ಪೇಸ್ವಾಮಿ, ಜಬೀವುಲ್ಲಾ, ಸಿಬ್ಬಂದಿ ಬಿ.ಟಿ. ಮಂಜುನಾಥ, ವರದರಾಜ್‌, ಸಂದೀಪ್‌, ಆನಂದ, ಮುಖಂಡರಾದ ನಾಗರಾಜ್‌, ಪಾಲಯ್ಯ ಮತ್ತಿತರರು ಇದ್ದರು.

ವಿಶ್ವೇಶ್ವರಯ್ಯ ಪುತ್ಥಳಿಗೆ ಮಾಲಾರ್ಪಣೆ : ಚಿತ್ರದುರ್ಗ: ನಗರದ ಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ಇಂಜಿನಿಯರ್ಸ್‌ ದಿನಾಚರಣೆ ಆಚರಿಸಲಾಯಿತು.

ಕಚೇರಿ ಆವರಣದಲ್ಲಿರುವಸರ್‌.ಎಂ. ವಿಶ್ವೇಶ್ವರಯ್ಯ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿಸ್ಮರಣೆ ಮಾಡಲಾಯಿತು. ಕರ್ನಾಟಕ ಇಂಜಿನಿಯರ್‌ಗಳ ಸಂಘ, ಕರ್ನಾಟಕ ಇಂಜಿನಿಯರಿಂಗ್‌ ಸೇವಾ ಸಂಘ, ಸರ್ಕಾರಿ ನೌಕರರ ಸಂಘ, ಜಿಲ್ಲಾ ಗುತ್ತಿಗೆದಾರರ ಸಂಘ, ಜಿಲ್ಲಾ ಪ್ರಾಕ್ಟಿಸಿಂಗ್‌ ಆರ್ಕಿಟೆಕ್ಟ್ ಹಾಗೂ ಇಂಜಿನಿಯರ್ಸ್‌

Advertisement

ಅಸೋಸಿಯೇಷನ್‌ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಸರ್ಕಾರಿ ನೌಕರರ ಸಂಘದಜಿಲ್ಲಾಧ್ಯಕ್ಷ ಮಂಜುನಾಥ್‌, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಸತೀಶ್‌, ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಪಿ.ಎಲ್‌. ಸುರೇಶ್‌ರಾಜು, ಜಿಲ್ಲಾ ಹೋಟೆಲ್‌ ಮಾಲಿಕರ ಸಂಘದ ಅಧ್ಯಕ್ಷ ಅರುಣ್‌ಕುಮಾರ್‌ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next