Advertisement

ಆಡಳಿತ ಯಂತ್ರವಿನ್ನು ಚುನಾವಣ ಕಾರ್ಯದಲ್ಲಿ ವ್ಯಸ್ತ: ನಾಗರಿಕ ಸೇವೆಯಲ್ಲಿ ವ್ಯತ್ಯಯ ಸಂಭವ

12:00 AM Mar 30, 2023 | Team Udayavani |

ಮಂಗಳೂರು: ಚುನಾವಣೆ ಘೋಷಣೆಯಾಗುತ್ತಿದ್ದಂತೆ ಇಡೀ ಆಡಳಿತ ಯಂತ್ರ ಚುನಾವಣ ಪ್ರಕ್ರಿಯೆಯತ್ತ ಗಮನ ಹರಿಸಿದೆ. ಒಂದೆರಡು ತಿಂಗಳುಗಳಿಂದಲೇ ಪೂರಕ ಕೆಲಸಗಳು ನಡೆಯುತ್ತಿದ್ದು, ಈಗ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಅಧಿಕಾರಿಗಳು, ಸರಕಾರಿ ಸಿಬಂದಿ ಇನ್ನು ಅದರಲ್ಲೇ ವ್ಯಸ್ತರಾಗಲಿದ್ದಾರೆ.

Advertisement

ಜಿಲ್ಲಾ ಚುನಾವಣಾಧಿಕಾರಿಯವರ ಅಧೀನದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾ ರರು, ಮಂಗಳೂರು ಪಾಲಿಕೆಯ ಅಧಿ ಕಾರಿಗಳಿಗೆ ವಿವಿಧ ಹೊಣೆ ವಹಿಸಲಾಗಿದೆ.

ರಿಟರ್ನಿಂಗ್‌ ಅಧಿಕಾರಿ, ಸಹಾಯಕ ರಿಟರ್ನಿಂಗ್‌ ಅಧಿಕಾರಿಗಳಾಗಿ ಹಿರಿಯ ಅಧಿಕಾರಿಗಳನ್ನು ನಿಯೋಜಿಸಿದರೆ ಮಧ್ಯಮ ಸ್ತರದ ಅಧಿಕಾರಿಗಳನ್ನು ಸೆಕ್ಷನ್‌ ಅಧಿಕಾರಿ ಗಳನ್ನಾಗಿ, ನಗದು ವಶ ತಂಡ, ದೂರು ನಿಗಾ ಸಮಿತಿ, ಮಾಧ್ಯಮ ನಿಗಾ, ಸಾಮಾಜಿಕ ಜಾಲತಾಣ ನಿಗಾ, ಫ್ಲೆ$çಯಿಂಗ್‌ ಸ್ಕ್ಯಾಡ್‌ಗಳಲ್ಲಿ ನಿಯೋಜಿಸಲಾಗಿದೆ. ಸ್ವೀಪ್‌ ವಿಭಾಗ, ತರಬೇತಿ, ಇವಿಎಂ ನಿರ್ವಹಣೆ, ಕಾನೂನು ಸುವ್ಯವಸ್ಥೆ ನಿರ್ವಹಣೆ ಇತ್ಯಾದಿಗೆ 15ಕ್ಕೂ ಅಧಿಕ ಉಪಸಮಿತಿಗಳನ್ನು ರಚಿಸಲಾಗಿದೆ.

ಇನ್ನೆರಡು ತಿಂಗಳು ಚುನಾವಣ ಕೆಲಸ ಗಳೇ ಇರುವುದರಿಂದ ಕಂದಾಯ, ಮಹಾ ನಗರ ಪಾಲಿಕೆ ಸೇರಿದಂತೆ ಸ್ಥಳೀಯಾಡಳಿತ ಸಂಸ್ಥೆಗಳ ಅನೇಕ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಗಳಿವೆ.

ತಾಲೂಕು ಕಚೇರಿಗಳಲ್ಲಿ ಜಾತಿ ಪ್ರಮಾಣ ಪತ್ರ, ಪಹಣಿ ಪತ್ರ ಖಾತೆ ಬದಲಾವಣೆ, ಆದಾಯ ಪ್ರಮಾಣ ಪತ್ರ, ತಹಸೀಲ್ದಾರ್‌, ರೆವಿನ್ಯೂ ಇನ್‌ಸ್ಪೆಕ್ಟರ್‌ ಸಹಿ ಹಾಕಬೇಕಾದ ವಿವಿಧ ಎನ್‌ಒಸಿಗಳು ಇತ್ಯಾದಿ ಪಡೆಯುವುದು ಬಹುತೇಕ ಕಷ್ಟಸಾಧ್ಯ.

Advertisement

ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‌ಗಳ ಲ್ಲೂ ಕಟ್ಟಡ ಪರವಾನಿಗೆ ಪಡೆಯು ವುದು, ನೀರು, ಒಳಚರಂಡಿ ಸಂಬಂ ಧಿಸಿದ ದೂರು ದುಮ್ಮಾನಗಳನ್ನು ಬಗೆಹರಿ ಸಲು ಅಧಿಕಾರಿಗಳು ಸಿಗುವುದು ತುಸು ಕಷ್ಟ. ಇನ್ನು ಮುಂದೆ ಅಧಿಕಾರಿಗಳಿಗೆ ಕರ್ತವ್ಯದ ಜತೆಯಲ್ಲೇ ತರಬೇತಿ, ಸಭೆಗಳು ನಿರಂತರವಾಗಿ ನಡೆಯುತ್ತಲೇ ಇರಲಿವೆ.ಅದರ ನಡುವೆ ಅಧಿಕಾರಿಗಳು ಚುನಾವಣೆ ನೆಪ ಹೇಳಿ ಕೆಲಸ ಮಾಡದಿರುವ ಸಾಧ್ಯತೆಗಳೂ ಇವೆ. ಹಾಗಾಗಿ ತುರ್ತು ಕೆಲಸಗಳಿಗಾಗಿ ಒಂದು ಡೆಸ್ಕ್ ಹಾಗೂ ಅಧಿಕಾರಿಗಳನ್ನು ಮಹಾನಗರಪಾಲಿಕೆಯಲ್ಲಿ ನಿಯೋಜನೆ ಮಾಡಬೇಕು ಎನ್ನುತ್ತಾರೆ ನಾಗರಿಕ ಹಿತರಕ್ಷಣ ವೇದಿಕೆಯ ಜಿ. ಹನುಮಂತ ಕಾಮತ್‌.

ಕುಡಿಯುವ ನೀರಿನ ಬಿಸಿ
ಚುನಾವಣೆಗೆ ಈ ಬಾರಿ ಕುಡಿಯುವ ನೀರಿನ ಬಿಸಿಯೂ ತಟ್ಟುವ ಸಾಧ್ಯತೆ ದಟ್ಟವಾಗಿದೆ. ಕಳೆದ ನಾಲ್ಕಾರು ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಾರ್ಚ್‌ನಲ್ಲಿ ಮಳೆಯೇ ಆಗದಿರುವುದು ಕುಡಿಯುವ ನೀರಿನ ತತ್ವಾರ ಹೆಚ್ಚಲು ಕಾರಣ. ಇಂತಹ ಜನರ ಸಮಸ್ಯೆಗಳಿಗೆ ಸ್ಪಂದಿಸುವುದಕ್ಕೆ ಅಧಿಕಾರಿಗಳಿಲ್ಲದೆ ಹೋದರೂ ಅದು ಚುನಾವಣೆಗೆ ಹಿನ್ನಡೆ ತರುವ ಸಾಧ್ಯತೆಯೂ ಇಲ್ಲದಿಲ್ಲ.

ಅಧಿಕಾರಿಗಳಿಗೆ ಚುನಾವಣ
ಕೆಲಸ ಇದ್ದರೂ ಅವರು ದೈನಂದಿನ ಜನರ ಸೇವೆಗಳನ್ನು ಕೈಬಿಡು ವಂತಿಲ್ಲ, ಈ ಬಗ್ಗೆ ನಾನು ಎಲ್ಲ ಅಧಿಕಾರಿ ಗಳಿಗೆ ಸೂಚನೆ ನೀಡಲಿ ದ್ದೇನೆ. ನೀರಿನ ಸಮಸ್ಯೆ ಇರ ಬಹುದು, ಯಾವುದೇ ಇತರ ಸೇವೆಗಳಿರ ಬಹುದು, ಮಂಗಳೂರು ಮಹಾನಗರ ಪಾಲಿಕೆಯಲ್ಲೂ ಪ್ರತ್ಯೇಕ ಕೌಂಟರ್‌ ಮಾಡುವಂತೆ ಸೂಚಿಸಿದ್ದೇನೆ.
– ರವಿಕುಮಾರ್‌ ಎಂ.ಆರ್‌, ದ.ಕ ಜಿಲ್ಲಾಧಿಕಾರಿ

ಯಾವತ್ತಿನಂತೆ ಚುನಾವಣ ಕರ್ತವ್ಯದಲ್ಲಿ ಸರಕಾರಿ ಅಧಿಕಾರಿಗಳು ಪಾಲ್ಗೊಳ್ಳಬೇಕಾಗುತ್ತದೆ. ಕೆಲವು ಸೇವೆಗಳಲ್ಲಿ ವ್ಯತ್ಯಯ ಆಗುತ್ತದೆ ನಿಜ, ಆದಷ್ಟೂ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ವ್ಯವಸ್ಥೆ ಮಾಡಲಾಗು ವುದು.
ಚನ್ನಬಸಪ್ಪ, ಆಯುಕ್ತರು, ಮಂಗಳೂರು ಮಹಾನಗರಪಾಲಿಕೆ

Advertisement

Udayavani is now on Telegram. Click here to join our channel and stay updated with the latest news.

Next