Advertisement

ವಿಷದ ಬಾಟಲಿ ಹಿಡಿದು ನೌಕರರ ಧರಣಿ

12:47 PM Aug 04, 2019 | Team Udayavani |

ಚಿಕ್ಕಮಗಳೂರು: ವಿಷ ಸೇವಿಸಲು ಮುಂದಾದ ಮಲ್ಲೇಗೌಡ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಉಚ್ಚಾಟಿತ ಹೊರಗುತ್ತಿಗೆ ನೌಕರರ ಕೈಯಲ್ಲಿದ್ದ ವಿಷದ ಬಾಟಲಿಯನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ನಗರದಲ್ಲಿ ನಡೆಯಿತು.

Advertisement

ಸರ್ಕಾರಿ ಆದೇಶದಂತೆ ಜಿಲ್ಲಾಸ್ಪತ್ರೆ ಯಲ್ಲಿ ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದು ಹಾಕಿದ್ದನ್ನು ವಿರೋಧಿಸಿ ಗುರುವಾರದಿಂದ ಪ್ರತಿಭಟನೆಗೆ ಮುಂದಾಗಿದ್ದ ನೌಕರರು, ಶನಿವಾರ ಆಸ್ಪತ್ರೆ ಮುಂಭಾಗ ಧರಣಿ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಹೊರಗುತ್ತಿಗೆ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷೆ ರಾಧಾ ಸುಂದರೇಶ್‌ ಆಗಮಿಸಿ ಬೆಂಬಲ ವ್ಯಕ್ತಪಡಿಸಿದರು.

ಇದೇ ವೇಳೆ ಹಲವರಿಂದ ಸಹಿ ಹಾಕಿಸಿಕೊಂಡು ಕೆಲಸಕ್ಕೆ ಹಾಜರಾಗುವಂತೆ ವೈದ್ಯಾಧಿಕಾರಿಗಳು ಸೂಚಿಸಿದರು. ಆದರೆ, ನೌಕರರು ಮಾತ್ರ ತೆಗೆದು ಹಾಕಿರುವ ಕೆಲಸಗಾರರನ್ನು ಕೆಲಸಕ್ಕೆ ಸೇರಿಸಿಕೊಳ್ಳುವವರೆಗೂ ಹೋರಾಟ ಮುಂದುವರೆಸುವುದಾಗಿ ಪ್ರತಿಭಟನೆ ಮುಂದುವರೆಸಿದರು.

ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರು ವಿಷದ ಬಾಟಲಿಯನ್ನು ಹಿಡಿದು ಸೇವಿಸಲು ಮುಂದಾದರು. ಆಗ ಸ್ಥಳದಲ್ಲಿದ್ದ ಪೊಲೀಸರು ವಿಷದ ಬಾಟಲಿ ಕಸಿಯಲು ಮುಂದಾದರು. ಈ ವೇಳೆ ಆಕ್ರೋಶಗೊಂಡ ನೌಕರರು ‘ಕೆಲಸ ಕೊಡಿ ಇಲ್ಲವೇ ವಿಷ ಕೊಡಿ’ ಎಂದು ಏರುಧ್ವನಿಯಲ್ಲೇ ಆಗ್ರಹಿಸಿದರು. ಆಗ, ಪೊಲೀಸರು ಸಮಾಧಾನಪಡಿಸಿ ವಿಷದ ಬಾಟಲಿ ವಶಕ್ಕೆ ಪಡೆದರು.

ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಸರ್ಜನ್‌ ಡಾ| ಕುಮಾರ್‌ ನಾಯಕ್‌ ಮಾತನಾಡಿ, ಸರ್ಕಾರದ ಆದೇಶಕ್ಕೆ ಎಲ್ಲರೂ ಗೌರವ ಕೊಡಬೇಕು. ಅದು ನಮ್ಮ ಕರ್ತವ್ಯ. ಇದು ನಮ್ಮ ಸ್ವಂತ ನಿರ್ಧಾರವಲ್ಲ. ಎರಡು ದಿನ ಸಮಾಧಾನವಾಗಿರಿ ಎಂದರು.

Advertisement

ರಾಜ್ಯಾಧ್ಯಕ್ಷೆ ರಾಧಾ ಸುಂದರೇಶ್‌ ಮಾತನಾಡಿ, ಕಳೆದ 20ವರ್ಷಗಳಿಂದ ಹೊರಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿರುವವರನ್ನು ತೆಗೆದುಹಾಕುವುದು ನ್ಯಾಯವಲ್ಲ. ಇದನ್ನೇ ನಂಬಿ ಆ ಕುಟುಂಬಗಳು ಜೀವನ ಸಾಗಿಸುತ್ತಿವೆ ಎಂದು ಪೊಲೀಸ್‌ ವರಿಷ್ಠಾಧಿಕಾರಿಗಳ ಬಳಿ ತೆರಳಿ ನೌಕರರ ಅಳಲು ತೋಡಿಕೊಂಡಾಗ ಅವರು ಸ್ಪಂದಿಸಿದ್ದಾರೆ. ನಂತರ ಜಿಲ್ಲಾಸ್ಪತ್ರೆಗೆ ಬಂದಾಗ, ಸರ್ಕಾರದ ಆದೇಶ ಪಾಲನೆ ಮಾಡಿ ಎನ್ನುತ್ತಾರೆ. ಆದರೆ, ಹಳಬರನ್ನು ಮುಂದುವರಿಸಬೇಕೆಂದು ಕೇಳಿದಾಗ, ವೈದ್ಯಾಧಿಕಾರಿಗಳು ಕೂಡಲೇ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಸೂಚಿಸಿದ್ದಾರೆ ಎಂದರು.

ಪತ್ರಕರ್ತ ಎನ್‌.ರಾಜು, ನೌಕರರಾದ ಬಾಬು, ರುಕ್ಮಿಣಿ, ಗುರುವಮ್ಮ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next