Advertisement
ಕಸಬಾ ಹೋಬಳಿ ಬುಕ್ಕನಹಳ್ಳಿ ಸರ್ವೇ ನಂ.54 ರಲ್ಲಿ 13.3 ಎಕರೆ ಪ್ರದೇಶದಲ್ಲಿ ಕೆರೆ ಇದ್ದು ಅದರಲ್ಲಿ ಬುಕ್ಕನಹಳ್ಳಿಯ ರಾಮರೆಡ್ಡಿ ಎಂಬುವವರು 10 ಗುಂಟೆ ಜಮೀನನ್ನು ಒತ್ತುವರಿ ಮಾಡಿಕೊಂಡು ವ್ಯವಸಾಯ ಮಾಡಿಕೊಂಡಿದ್ದರು.
Related Articles
Advertisement
ಒತ್ತುವರಿ ಜಾಗದಲ್ಲಿ 2 ಕೊಳವೆ ಬಾವಿ: ಒತ್ತುವರಿಯಾಗಿರುವ ಬುಕ್ಕನಹಳ್ಳಿ ಕೆರೆ ಅಂಗಳ ಪ್ರದೇಶದಲ್ಲಿ 2 ಕೊಳವೆ ಬಾವಿಗಳನ್ನು ಕೊರೆದಿದ್ದು, ಕೊರೆಯಬೇಕಾದರೆ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸದಿರುವುದು ಅಧಿಕಾರಿಗಳ ಮತ್ತೂಂದು ಬೇಜಾವಬ್ದಾರಿಗೆ ಹಿಡಿದ ಕನ್ನಡಿಯಾಗಿದೆ.
ರಾಜಕೀಯ ಮುಖಂಡರಿಂದ ಒತ್ತುವರಿ: ಒತ್ತುವರಿ ಮಾಡಿಕೊಂಡಿರುವ ರಾಮರೆಡ್ಡಿ ಮಾತನಾಡಿ, ಕೆರೆಯ ಪಕ್ಕದಲ್ಲಿನ ಸರ್ವೆ ನಂ 51,57, ಮತ್ತು 58ರ ಖಾಸಗಿ ಜಮೀನಿನವರಿಗೆ ತಮ್ಮ ಜಮೀನಿಗೆ ಹಾದು ಹೋಗಲು ಸೂಕ್ತ ದಾರಿ ಇಲ್ಲದಾಗಿದ್ದು, ನಮ್ಮ ಜಮೀನುಗಳಿಗೆ ದಾರಿ ಮಾಡಿಕೊಡಿ ಎಂದು ಕಳೆದ ಒಂದು ವರ್ಷದಿಂದ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ವಿನಂತಿಸಿಕೊಂಡಿದ್ದರೂ ಕ್ರಮ ಕೈಗೊಂಡಿಲ್ಲ.
ಬುಕ್ಕನಹಳ್ಳಿ ವ್ಯಾಪ್ತಿಯಲ್ಲಿ ಮತ್ತೂಂದು ಕೆರೆ ಪ್ರದೇಶವಿದ್ದು, ಅದರಲ್ಲಿ ಹಿರಿಯ ರಾಜಕೀಯ ಮುಖಂಡರೊಬ್ಬರು ಇದೇ ರೀತಿ ಕೆರೆ ಒತ್ತುವರಿ ಮಾಡಿಕೊಂಡು ಕೃಷಿಹೊಂಡ ಮತ್ತು ಕೊಳವೆ ಬಾವಿ ಕೊರೆಸಿಕೊಂಡು ದರ್ಬಾರ್ ಮಾಡುತ್ತಿದ್ದಾರೆ. ಅವರ ಬಗ್ಗೆಯೂ ಸಹ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ. ಆದರೆ ಅಧಿಕಾರಿಗಳು ಮಾತ್ರ ನಮ್ಮಂತಹವರ ಮೇಲೆ ತಮ್ಮ ದರ್ಪ ತೋರುತ್ತಾರೆ ಎಂದು ದೂರಿದರು.
ಒತ್ತುವರಿ ತೆರವು ಕಾರ್ಯದಲ್ಲಿ ಪಂಚಾಯತ್ ರಾಜ್ ಇಲಾಖೆ ಅಭಿಯಂತರರ ರವೀಂದ್ರ, ಸಹಾಯಕ ಕಿರಿಯ ಇಂಜಿನಿಯರ್ ವೆಂಕಟೇಶ್ ಮೂರ್ತಿ ಮತ್ತು ಕಸಬಾ ಹೋಬಳಿ ಕಂದಾಯ ವೃತ್ತ ನೀರಿಕ್ಷಕರು ಹಾಜರಿದ್ದರು.