Advertisement

ರಂಗ ಪಯಣ ಮುಗಿಸಿದ ಸುಭದ್ರಮ್ಮ

01:11 AM Jul 17, 2020 | Hari Prasad |

ಬಳ್ಳಾರಿ: ಹಿರಿಯ ರಂಗ ಕಲಾವಿದೆ, ನಾಡೋಜ ಪುರಸ್ಕೃತೆ ಡಾ| ಸುಭದ್ರಮ್ಮ ಮನ್ಸೂರ್‌ (81) ತಮ್ಮ ಐದು ದಶಕಗಳ ಕಲಾಸೇವೆ ಪಯಣ ಮುಗಿಸಿದ್ದಾರೆ.

Advertisement

ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಬುಧವಾರ ಮಧ್ಯರಾತ್ರಿ ನಿಧನ ಹೊಂದಿದ್ದು, ರಂಗಭೂಮಿಯ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ.

ಸುಭದ್ರಮ್ಮ ಅವರಿಗೆ ‘ರಕ್ತರಾತ್ರಿ’ ನಾಟಕದ ದ್ರೌಪದಿ ಮತ್ತು ‘ಹೇಮರೆಡ್ಡಿ ಮಲ್ಲಮ್ಮ’ ನಾಟಕದ ಮಲ್ಲಮ್ಮ ಪಾತ್ರ ಹೆಸರು ತಂದುಕೊಟ್ಟಿದ್ದವು.

ಅವರ ಸುಮಧುರ ಕಂಠದಿಂದ ಮೂಡಿಬಂದ ವಚನಗಳು ಶ್ರೋತೃಗಳನ್ನು ರಂಜಿಸಿದ್ದವು. 1939ರಲ್ಲಿ ಜನಿಸಿದ್ದ ಸುಭದ್ರಮ್ಮ 2020ರ ತನಕವೂ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next