Advertisement
ದೇಹದ ಯಾವುದೇ ಭಾಗಗಳಲ್ಲಿ ಸಹಿಸಲಾರದ ನೋವಿದ್ದರೆ ಆ ವ್ಯಕ್ತಿಗೆ ಸಾಮಾನ್ಯವಾಗಿ ಜ್ವರ ಬರುವುದು ಸಹಜ. ಆದರೆ ಜ್ವರ ಕೂಡ ಕೋವಿಡ್-19 ಲಕ್ಷಣವಾಗಿರುವುದರಿಂದ ಇದಕ್ಕೂ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿ ಪರೀಕ್ಷೆ ಮಾಡಿಸಿಕೊಳ್ಳ ಬೇಕು. ಅಲ್ಲದೆ ಇದು ನೋವಿನಿಂದ ಬರುವ ಜ್ವರವೆಂದು ಗೊತ್ತಿದ್ದರೂ ಖಾಸಗಿ ಕ್ಲಿನಿಕ್, ಖಾಸಗಿ ಆಸ್ಪತ್ರೆ ವೈದ್ಯರು ರೋಗಿಯನ್ನು ಮುಟ್ಟಲು ಕೂಡ ಮುಂದಾಗುವುದಿಲ್ಲ. ಏಕೆಂದರೆ ಆ ರೋಗಿಗೆ ಕೊರೊನಾವಿದ್ದಲ್ಲಿ ಅಥವಾ ಜ್ವರವಿದ್ದೂ ಚಿಕಿತ್ಸೆ ಮುಂದುವರಿಸಿದಲ್ಲಿ ಮುಂದೆ ಚಿಕಿತ್ಸೆ ನೀಡಿದ ಆಸ್ಪತ್ರೆ, ವೈದ್ಯರ ಮೇಲೆಯೂ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ.
ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಕನ್ಯಾನದ ವ್ಯಕ್ತಿಯೋರ್ವರಿಗೆ ಕಳೆದ ವಾರ ಕೋವಿಡ್-19 ಪರೀಕ್ಷೆ ಮಾಡಬೇಕೆಂದು ವಿಟ್ಲದ ಆಸ್ಪತ್ರೆಯಿಂದ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ಶಿಫಾರಸು ಮಾಡಿಲಾಗಿತ್ತು. ಕೋವಿಡ್ ಆಸ್ಪತ್ರೆಯಲ್ಲಿ ತುಂಬಾ ಕಾಯಬೇಕಾಗಿ ಬಂದು, ಅವರ ನಿಜವಾದ ಸಮಸ್ಯೆಗೆ ಸಕಾಲದಲ್ಲಿ ಔಷಧ ಸಿಗದೆ ಮೃತಪಟ್ಟಿದ್ದಾರೆ ಎಂಬುದು ಮನೆಯವರ ಆರೋಪ. ಇದೇ ರೀತಿ ತುರ್ತು ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ಅಸಹಾಯಕರಾಗಿ ಸಂಕಷ್ಟ ಅನುಭವಿಸುತ್ತಿರುವ ಬೆಳಕಿಗೆ ಬರದ ಪ್ರಕರಣಗಳು ಹಲವೆಡೆ ಇದ್ದು, ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ಇಂತಹವರಿಗೆ ಸ್ಥಳೀಯವಾಗಿಯೇ ತುರ್ತು ಚಿಕಿತ್ಸೆ ಕೊಡಿಸುವುದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ.
Related Articles
ಈಗಾಗಲೇ 600ಕ್ಕೂ ಹೆಚ್ಚು ಗಂಟಲ ದ್ರವ ಮಾದರಿ ಪರೀಕ್ಷೆಗೆ ಬಾಕಿ ಇರುವುದರಿಂದ ಮತ್ತು ಆ ಎಲ್ಲ ಮಾದರಿಗಳೂ ಅಗತ್ಯವಾಗಿ ಪರೀಕ್ಷಿಸಲೇಬೇಕಾದ ಒತ್ತಡ ವೈದ್ಯರಿಗೆ ಇರುವುದರಿಂದ ಯಾವುದನ್ನು ಮೊದಲು ಮಾಡುವುದು, ಯಾವುದನ್ನು ಅನಂತರ ಪರೀಕ್ಷಿಸುವುದು ಎಂಬ ಒತ್ತಡ-ಗೊಂದಲ ಕೂಡ ವೈದ್ಯರಲ್ಲಿದೆ.
Advertisement
ಎಲ್ಲ ರೋಗಿಗಳ ಮಾಹಿತಿ ಇರುವುದಿಲ್ಲಸಾರ್ವಜನಿಕ ಆರೋಗ್ಯ ನಿರ್ವಹಣೆ ಜಿಲ್ಲಾ ಆರೋಗ್ಯಾಧಿಕಾರಿ ವ್ಯಾಪ್ತಿಗೆ ಬರುತ್ತದೆ. ಪ್ರತಿ ರೋಗಿಗಳ ಬಗ್ಗೆ ನಮಗೆ ಮಾಹಿತಿ ಇರುವುದಿಲ್ಲ. ವೆನ್ಲಾಕ್ ಆಸ್ಪತ್ರೆಗೆ ಸಂಬಂಧಿಸಿದ ಮಾಹಿತಿಗಳನ್ನು ಅಲ್ಲಿನ ವೈದ್ಯಕೀಯ ಅಧೀಕ್ಷಕರಲ್ಲಿ ಕೇಳಬೇಕು.
-ಡಾ| ರಾಮಚಂದ್ರ ಬಾಯರಿ,
ದ.ಕ. ಜಿಲ್ಲಾ ಆರೋಗ್ಯಾಧಿಕಾರಿ