Advertisement

ಕಾಡಾನೆ ದಾಳಿ: ಫ‌ಸಲು ನಷ್ಟ

01:00 AM Feb 27, 2019 | Harsha Rao |

ಶನಿವಾರಸಂತೆ: ಸಮಿಪದ ಆಲೂರು ಸಿದ್ದಾಪುರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಚಿಕ್ಕ ಕಣಗಾಲು, ದೊಡ್ಡ ಕಣಗಾಲು, ಹಿತ್ತಲಗದ್ದೆ ಗ್ರಾಮಗಳಲ್ಲಿ ಕೆಲವು ದಿನಗಳಿಂದ ಕಾಡಾನೆಗಳ ಉಪಟಳ ಹೆಚ್ಚುತ್ತಿದೆ. ರಾತ್ರಿ ವೇಳೆಯಲ್ಲಿ ಕಾಡಾನೆಗಳು ಗ್ರಾಮದೊಳಗೆ ಬಂದು ಕೃಷಿಯನ್ನು ಹಾನಿಗೀಡು ಮಾಡುತ್ತಿವೆ.ಹೀಗಿದ್ದರೂ ಕಾಡಾನೆಗಳನ್ನು ಕಾಡಿಗೆ ಓಡಿಸಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. 

Advertisement

ಕೆಲವು ದಿನಗಳಿಂದ ಹಿರಿಕರ ಮೀಸಲು ಅರಣ್ಯ ದಿಂದ ಸುಮಾರು 3 ಕಾಡಾನೆಗಳ ಹಿಂಡು ಹಿತ್ತಲಗದ್ದೆ, ಚಿಕ್ಕಕಣಗಾಲು, ಕಂತೆ ಬಸವನಹಳ್ಳಿ, ದೊಡ್ಡ ಕಣಗಾಲು ಗ್ರಾಮಗಳಲ್ಲಿ ಸಂಚರಿಸುತಿವೆ. ರವಿವಾರ ರಾತ್ರಿ ಚಿಕ್ಕ ಕಣಗಾಲುಗ್ರಾಮದ ಕೆ.ಎಂ. ಮಲ್ಲೇಶ್‌, ರವಿ, ಶೇಖರ್‌ ಅವರ ಕಾಫಿತೋಟ, ಬಾಳೆತೋಟಗಳಿಗೆ ನುಗ್ಗಿದ ಕಾಡಾನೆಗಳು ಕಾಫಿಗಿಡ, ಬಾಳೆಗಿಡಗಳನ್ನು ತುಳಿದು ಫ‌ಸಲುನಷ್ಟಗೊಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next