Advertisement

Belthangady: ವಿದ್ಯುತ್‌ ಸ್ಪರ್ಶ: ಕೃಷಿಕ ಸಾವು

10:21 PM Aug 13, 2023 | Team Udayavani |

ಬೆಳ್ತಂಗಡಿ: ಅಲ್ಯೂಮಿನಿಯಂ ಏಣಿಯು ಆಕಸ್ಮಿಕವಾಗಿ ವಿದ್ಯುತ್‌ ತಂತಿಗೆ ಸ್ಪರ್ಷಿಸಿ ಉಂಟಾದ ಘಟನೆಯಿಂದಾಗಿ ಕಲ್ಮಂಜ ಗ್ರಾಮದ ಅಂಬಟೆ ಮನೆ ನಿವಾಸಿ, ಕೃಷಿಕರೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ.

Advertisement

ಕಲ್ಮಂಜ ಗ್ರಾಮದ ಅಂಬಟೆ ಮನೆ ನಿವಾಸಿ ಶಶಿಧರನ್‌ ನಾಯರ್‌ (68) ಮೃತಪಟ್ಟವರು.

ಆ.12 ರಂದು ಶಶಿಧರನ್‌ ಅವರು ಮನೆಯ ಹತ್ತಿರ ಇರುವ ತೋಟದ ತೆಂಗಿನ ಮರದಿಂದ ಸೀಯಾಳ ತೆಗೆಯಲೆಂದು ಮನೆಯಲ್ಲಿದ್ದ ಅಲ್ಯುಮಿನಿಯಂ ದೋಂಟಿಯನ್ನು ತೆಗೆದುಕೊಂಡು ಹೋಗಿದ್ದು ಹೋದ ಸ್ವಲ್ಪ ಹೊತ್ತಿನಲ್ಲಿ ಜೋರಾಗಿ ಬೊಬ್ಬೆ ಹಾಕಿದಂತೆ ಶಬ್ದ ಕೇಳಿಬಂದಿತ್ತು. ಈ ವೇಳೆ ಪತ್ನಿ ಹಾಗೂ ಈ ವೇಳೆ ಮನೆಯಲ್ಲಿದ್ದ ಆಂಟನಿ ಬಿ.ಎಸ್‌. ನೋಡಿದಾಗ ಶಶಿಧರನ್‌ ಕುಸಿದು ಬಿದ್ದಿದ್ದರು. ಅವರು ಬಿದ್ದ ಜಾಗದಲ್ಲೇ ಮೇಲ್ಭಾಗದಲ್ಲಿ ವಿದ್ಯುತ್‌ ತಂತಿ ಹಾದು ಹೋಗಿದ್ದು, ವಿದ್ಯುತ್‌ ಸ್ಪರ್ಷದಿಂದ ಘಟನೆ ಆಗಿದೆ ಎಂದು ಮೃತರ ಪತ್ನಿ ಜಯಪ್ರಕಾಶಿನಿ ಅವರು ಪೊಲೀಸ್‌ ದೂರಿನಲ್ಲಿ ತಿಳಿಸಿದ್ದಾರೆ. ಗಾಯಾಳುವನ್ನು ತಕ್ಷಣ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದೊಯ್ದರೂ ಅದಾಗಲೇ ಅವರು ಮೃತಪಟ್ಟಿದ್ದಾಗಿ ವರದಿಯಾಗಿದೆ.

ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next