Advertisement

ಇಸ್ತ್ರಿ ಹಾಕುತ್ತಿದ್ದಾಗ ವಿದ್ಯುತ್‌ ಸ್ಪರ್ಶಿಸಿ ಸಾವು

11:20 PM Sep 14, 2019 | Team Udayavani |

ಪುತ್ತೂರು: ಕೋಡಿಂಬಾಡಿ ಗ್ರಾಮದ ದರ್ಖಾಸಿನ ಮನೆಯೊಂದರಲ್ಲಿ ಬಟ್ಟೆಗಳಿಗೆ ಇಸ್ತ್ರಿ ಹಾಕುತ್ತಿದ್ದ ಸಂದರ್ಭ ವಿದ್ಯುತ್‌ ಸ್ಪರ್ಶವಾಗಿ ಯುವಕ ಮೃತಪಟ್ಟಿದ್ದಾನೆ. ಪುತ್ತೂರಿನ ಬೊಳುವಾರಿನಲ್ಲಿ ಎಲೆಕ್ಟ್ರಿಕಲ್‌ ಅಂಗಡಿ ಹೊಂದಿರುವ ಕೋಡಿಂಬಾಡಿ ಗ್ರಾಮದ ದರ್ಖಾಸು ನಿವಾಸಿ ಗಣೇಶ್‌ ಗೌಡ ಕೆ.ಎಸ್‌. (36) ಮೃತಪಟ್ಟವರು.

Advertisement

ಶುಕ್ರವಾರ ರಾತ್ರಿ 10.30ರ ಹೊತ್ತಿಗೆ ಘಟನೆ ಸಂಭವಿಸಿದೆ. ಮೃತರು ತಾಯಿ, ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ. ಗಣೇಶ್‌ ವೃತ್ತಿಯಲ್ಲಿ ಎಲೆಕ್ಟ್ರೀಷಿಯನ್‌ ಆಗಿದ್ದು, ಎಲೆಕ್ಟ್ರಿಕಲ್‌ ಉಪಕರಣ ದುರಸ್ತಿ ಹಾಗೂ ವೈಂಡಿಗ್‌ನಲ್ಲಿ ನುರಿತವರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next