Advertisement

ಎಲೆಕ್ಟ್ರಿಕಲ್ಸ್‌, ವೈಂಡರ್ಸ್‌ ಅಂಗಡಿಯಿಂದ ಕಳವು

08:42 PM Mar 14, 2023 | Team Udayavani |

ಎಲೆಕ್ಟ್ರಿಕಲ್ಸ್‌, ವೈಂಡರ್ಸ್‌ ಅಂಗಡಿಯಿಂದ ಕಳವು

Advertisement

ಬೆಳ್ತಂಗಡಿ: ಚಿಬಿದ್ರೆಯ ಜೆ.ಕೆ. ಎಲೆಕ್ಟ್ರಿಕಲ್ಸ್‌ ಮತ್ತು ವೈಂಡರ್ಸ್‌ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳರು ಅಂಗಡಿಯೊಳಗಿದ್ದ ಕಾಫ‌ರ್‌ ವೇರ್‌ (ಸ್ಕ್ರಾಪ್‌ ) ಹಾಗೂ ಬೋರ್‌ವೆಲ್‌ಗೆ ಸಂಬಂಧಿಸಿದ ಸುಮಾರು 94 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ಕಳವುಗೈದಿದ್ದಾರೆ.

ತೋಟತ್ತಾಡಿ ಗ್ರಾಮದ ಡೊಂಬರಮಜಲು ಮನೆ ನಿವಾಸಿ ಜಯಾನಂದ ಡಿ. ಪೂಜಾರಿ ಅವರ ಮಾಲಕತ್ವದ ಜಿ.ಕೆ. ಅಂಗಡಿಯಿಂದ ಈ ಸೊತ್ತುಗಳು ಕಳವಾಗಿದೆ. ಮಾ. 12ರಂದು ಬೆಳಗ್ಗೆ ಅಂಗಡಿಗೆ ಬಂದು ನೋಡಿದಾಗ ಕಳವಾಗಿರುವುದು ತಿಳಿದುಬಂದಿದೆ.

ಕಳ್ಳರು ಅಂಗಡಿ ಬೀಗ ಮುರಿದು ಒಳಪ್ರವೇಶಿಸಿ ಅಂಗಡಿಯಲ್ಲಿದ್ದ ಸ್ಕ್ರಾಪ್‌ 20 ಕೆ.ಜಿ. ಮತ್ತು ರಿಪೇರಿಗೆ ತಂದಿದ್ದ ಬೋರ್‌ವೆಲ್‌ನ ಸಬ್‌ಮರ್ಸಿಬಲ್‌ ಮೋಟಾರ್‌ಗಳು 11 ಹಾಗೂ ಸಿಂಗಲ್‌ ಪೇಸ್‌ ಎರಡು ಎಚ್‌.ಪಿ.ಯ 2 ಮೋಟಾರ್‌ಗಳನ್ನು ಕಳವು ಮಾಡಿದ್ದಾರೆ. ಜಯಾನಂದ ಅವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

——

Advertisement

ಕೂಲಿ ಕಾರ್ಮಿಕ ಮಹಿಳೆ ಕುಸಿದು ಬಿದ್ದು ಸಾವು
ಬೆಳ್ತಂಗಡಿ: ಕೂಲಿ ಕೆಲಸಕ್ಕೆಂದು ಮಾ. 12ರಂದು ತೆರಳಿದ್ದ ಮಹಿಳೆಯೋರ್ವರು ಕುಸಿದು ಬಿದ್ದು, ಪ್ರಜ್ಞೆ ತಪ್ಪಿದವರನ್ನು ಕೂಡಲೇ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಮುಂಡಾಜೆ ಗ್ರಾಮದ ಸನ್ಯಾಸಿಕಟ್ಟೆ ನಿವಾಸಿ ಪಾರ್ವತಿ (55) ಮೃತಪಟ್ಟವರು. ಮುಂಡಾಜೆ ಗ್ರಾಮದ ಸೊಮಂತ್ತಡ್ಕ ನಿವಾಸಿಯೋರ್ವರ ಮನೆಯಲ್ಲಿ ಕೆಲಸ ಮಾಡುತ್ತಿರುವ ಸಮಯ ಕುಸಿದು ಬಿದ್ದು, ಪ್ರಜ್ಞೆ ಕಳೆದುಕೊಂಡಿದ್ದರು. ಅವರನ್ನು ಆರೈಕೆ ಮಾಡಿ ತತ್‌ಕ್ಷಣ ಚಿಕಿತ್ಸೆಗೆ ಕಕ್ಕಿಂಜೆ ಆಸ್ಪತ್ರೆಗೆ ಕರೆದೊಯ್ದು ಬಳಿಕ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿ, ಅಲ್ಲಿನ ವೈದ್ಯರ ಸಲಹೆಯಂತೆ ಮಂಗಳೂರು ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಅವರ ಪುತ್ರಿ ಪುಷ್ಪಾ ಅವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next