Advertisement

ಉಪ ಆರೋಗ್ಯ ಕೇಂದ್ರಕ್ಕೆ ಪುನಃ ವಿದ್ಯುತ್‌ ಸಂಪರ್ಕ

07:47 PM Mar 07, 2021 | Team Udayavani |

ದೋಟಿಹಾಳ: ಸಮೀಪದ ಶಿರಗುಂಪಿ ಗ್ರಾಮದ ಉಪ ಆರೋಗ್ಯ ಕೇಂದ್ರಕ್ಕೆ ವಿದ್ಯುತ್‌ ಸಂಪರ್ಕ ನೀಡಬೇಕೆಂದು ಶಾಸಕ ಅಮರೇಗೌಡ ಪಾಟೀಲ್‌ ಬಯ್ನಾಪೂರ ಅ ಧಿಕಾರಿಗಳಿಗೆ ಮಾಹಿತಿ ನೀಡಿದ ಕಾರಣ ಹಾಗೂ ಗ್ರಾಪಂನವರು ಸೋಮವಾರದೊಳಗೆ ಬಾಕಿ ಬಿಲ್‌ ಪಾವತಿಸುತ್ತೇವೆಂದು ಹೇಳಿದ್ದರಿಂದ ಜೆಸ್ಕಾಂ ಅ ಧಿಕಾರಿಗಳು ಶನಿವಾರ ಉಪ ಆರೋಗ್ಯ ಕೇಂದ್ರಕ್ಕೆ ವಿದ್ಯುತ್‌ ಸಂಪರ್ಕ ನೀಡಿದರು.

Advertisement

ನಾಲ್ಕೈದು ದಿನಗಳಿಂದ ವಿದ್ಯುತ್‌ ಸಂಪರ್ಕವಿಲ್ಲದ ಕಾರಣ ರೋಗಿಗಳಿಗೆ ಕತ್ತಲಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಕುರಿತು “ಉದಯವಾಣಿ’ ಪತ್ರಿಕೆ ಮಾ. 4ರಂದು “ರೋಗಿಗಳಿಗೆ ಕತ್ತಲಲ್ಲೇ ಚಿಕಿತ್ಸೆ’ ಎಂಬ ಶೀಷಿರ್ಕೆಯಡಿ ವರದಿ ಪ್ರಕಟಿಸಿತ್ತು. ಇದನ್ನು ಗಮನಿಸಿದ ಶಾಸಕರು ಆರೋಗ್ಯ ಕೇಂದ್ರಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಪಿಡಿಒ ವೆಂಕಟೇಶ ಮಾತನಾಡಿ, ಶಿರಗುಂಪಿ ಗ್ರಾಮದ ಉಪಆರೋಗ್ಯ ಕೇಂದ್ರದ ವಿದ್ಯುತ್‌ ಬಿಲ್‌ ಬಾಕಿ ಇರುವುದರಿಂದ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿತ್ತು. ಕೇಂದ್ರಕ್ಕೆ ಮರಳಿ ಸಂಪರ್ಕ ನೀಡಲು ತಿಳಿಸಲಾಗಿದೆ. ಇಂದು(ಶನಿವಾರ) ಜೆಸ್ಕಾಂಗೆ ಚೆಕ್‌ ನೀಡಬೇಕಾಗಿತ್ತು. ಆದರೆ ತಾಪಂ ಕಚೇರಿಯಲ್ಲಿ ಮಿಟಿಂಗ್‌ ಇರುವ ಕಾರಣ ನಾನು ಗ್ರಾಪಂ ಕಚೇರಿಗೆ ಹೋಗಿಲ್ಲ. ಸೋಮವಾರದೊಳಗೆ ಅವರಿಗೆ ಚೆಕ್‌ ನೀಡುತ್ತೇನೆ. ಸದ್ಯ ಉಪ ಆರೋಗ್ಯ ಕೇಂದ್ರಕ್ಕೆ ಮರಳಿ ವಿದ್ಯುತ್‌ ಸಂಪರ್ಕ ನೀಡಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next