Advertisement

ವಿದ್ಯುತ್ ತಂತಿ ತಗುಲಿ ರೈತ ಹಾಗೂ ಜಾನುವಾರುಗಳು ಸಾವು

02:44 PM Oct 04, 2021 | Team Udayavani |

ಸೊರಬ: ಕೃಷಿ ಚಟುವಟಿಕೆಗೆ ತೆರಳುತ್ತಿದ್ದ ರೈತ ಸೇರಿದಂತೆ ಎರಡು ಎತ್ತು ಮತ್ತು ಒಂದು ಆಕಳು ಆಕಸ್ಮಿಕ ವಿದ್ಯುತ್ ತಂತಿ ತಗುಲಿ ಮೃತಪಟ್ಟಿರುವ ಘಟನೆ ತಾಲೂಕಿನ ಆನವಟ್ಟಿ ಸಮೀಪದ ಕೋಡಿಕೊಪ್ಪ ಗ್ರಾಮದಲ್ಲಿ ಸೋಮವಾರ ನಡೆದಿದೆ.

Advertisement

ಸಮನವಳ್ಳಿ ಗ್ರಾಮದ ಕುಮಾರ್ ಸುರೇಶಪ್ಪ (28 ವ) ಮೃತ ರೈತ. ಭಾನುವಾರ ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಕುಬಟೂರು ಕೆರೆ ಹಿಂಭಾಗದ ಕೋಡಿಕೊಪ್ಪ ಸರ್ವೆ ನಂ. 37ರ ಜಮೀನಿನಲ್ಲಿ ವಿದ್ಯುತ್ ತಂತಿ ಹರಿದು ಬಿದ್ದಿದೆ. ಇದನ್ನು ಗಮನಿಸದೇ ರೈತ ಕುಮಾರ್ ಆಕಸ್ಮಿಕವಾಗಿ ಸ್ಪರ್ಶಿಸಿರುವುದೇ ದುರ್ಘಟನೆ ಕಾರಣವಾಗಿದೆ. ಕುಮಾರ್ ಜೊತೆಯಲ್ಲಿದ್ದ ಎರಡು ಎತ್ತು ಮತ್ತು ಒಂದು ಆಕಳು ಸಹ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲಿಯೇ ಮೃತಪಟ್ಟಿವೆ.

ಇದನ್ನೂ ಓದಿ:ಬಿಜೆಪಿ ತನ್ನ ತಾಲಿಬಾನಿ‌ ಮನಸ್ಥಿತಿಯನ್ನು ಬೆತ್ತಲು‌ ಮಾಡಿಕೊಳ್ಳುತ್ತಿದೆ: ಸಿದ್ದರಾಮಯ್ಯ

ಸ್ಥಳಕ್ಕೆ ಪಿಎಸ್‍ಐ ಪ್ರವೀಣ್ ಕುಮಾರ್ ವಾಲೀಕರ್ ಹಾಗೂ ಪಶು, ಕಂದಾಯ ಮತ್ತು ಮೆಸ್ಕಾಂ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next