Advertisement

ಕೆದೂರು: ಟ್ರಾನ್ಸ್‌ಫಾರ್ಮರ್‌ನಲ್ಲಿ ಬೆಂಕಿ…ತಪ್ಪಿದ ಅನಾಹುತ

09:02 PM Apr 27, 2023 | Team Udayavani |

ತೆಕ್ಕಟ್ಟೆ: ಇಲ್ಲಿನ ಕೆದೂರು ತೋಟಗಾರಿಕೆ ಇಲಾಖೆ ಸಮೀಪದ ಟ್ರಾನ್ಸ್‌ಫಾರ್ಮರ್‌ನಲ್ಲಿ ಶಾರ್ಟ್‌ ಸರ್ಕ್ನೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಎ.27 ರಂದು ಮಧ್ಯಾಹ್ನ ಗಂಟೆ 2.30ರ ಸುಮಾರಿಗೆ ಸಂಭವಿಸಿದೆ.

Advertisement

ತಪ್ಪಿದ ಅನಾಹುತ
ಬೆಂಕಿ ಕಾಣಿಸಿಕೊಂಡಿರುವುದನ್ನು ಗಮನಿಸಿದ ಕೆದೂರು ಸೌರಭ್‌ ಶೆಟ್ಟಿ ಅವರು ಕೂಡಲೇ ಸಂಬಂಧಪಟ್ಟ ಅಗ್ನಿಶಾಮಕ ದಳದವರ ಗಮನಕ್ಕೆ ತರುವ ಮೂಲಕ ಸಂಭವನೀಯ ಭಾರೀ ಅವಘಡವೊಂದು ತಪ್ಪಿಸಿದ್ದಾರೆ. ಕುಂದಾಪುರದ ಅಗ್ನಿಶಾಮಕ ದಳದ ಸಿಬಂದಿ ಹಾಗೂ ಸ್ಥಳೀಯರಾದ ಶಾನಾಡಿ ರಾಮಚಂದ್ರ ಭಟ್‌, ನಾರಾಯಣ, ಕೃಷ್ಣ, ದತ್ತ ಹಾಗೂ ಇತರರು ಬೆಂಕಿ ನಂದಿಸಲು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next