Advertisement

Bantwala: ಮೆಷಿನ್ ನಲ್ಲಿ ಹುಲ್ಲು ತೆಗೆಯುವ ವೇಳೆ ವಿದ್ಯುತ್ ಶಾಕ್; ವ್ಯಕ್ತಿ ಸಾವು

03:19 PM Aug 12, 2023 | Team Udayavani |

ಬಂಟ್ವಾಳ: ಮನೆಯ ಅಂಗಳದಲ್ಲಿ ಮೆಷಿನ್ ಮೂಲಕ ಹಸಿರು ಹುಲ್ಲು ತೆಗೆಯುವ ವೇಳೆ ವಿದ್ಯುತ್ ಶಾಕ್ ಹೊಡೆದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಮೆಲ್ಕಾರ್ ಸಮೀಪದ ಬೋಗೋಡಿ ಎಂಬಲ್ಲಿ ನಡೆದಿದೆ.

Advertisement

ಬಾಗಲಕೋಟೆ ಮೂಲದ ಯಮನಪ್ಪ (38) ಮೃತಪಟ್ಟ ವ್ಯಕ್ತಿ.

ಗುಡ್ಡೆಯಂಗಡಿ ನಿವಾಸಿ ಸೈಪುದ್ದೀನ್ ಎಂಬಾತನ ಮನೆಯ ಅಂಗಳದಲ್ಲಿ ಹಸಿರು ಹುಲ್ಲನ್ನು ಮೆಷಿನ್ ಮೂಲಕ ಕತ್ತರಿಸುವ ವೇಳೆ ಈ ಘಟನೆ ನಡೆದಿದೆ.

ಅಂಗಳದಲ್ಲಿ ಬೋರ್ವೆಲ್ ಇದ್ದು, ಅದರೊಳಗಿರುವ ಪಂಪ್ ಗೆ ನೀಡಲಾದ ವಿದ್ಯುತ್ ಸಂಪರ್ಕದ ವಯರ್‌ ಅನ್ನು ಈತನ ಗೋಚರಕ್ಕೆ ಬರದೆ ಕತ್ತರಿಸಿದ್ದಾನೆ. ಆ ವೇಳೆ ವಿದ್ಯುತ್ ಹರಿದು ಈತ ಸ್ಥಳದಲ್ಲಿಯೇ ಮೃತಪಟ್ಟ ಬಗ್ಗೆ ಇಲ್ಲಿನ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಯಮನಪ್ಪ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿರಿಸಲಾಗಿದೆ.

Advertisement

ಘಟನಾ ಸ್ಥಳಕ್ಕೆ ಬಂಟ್ವಾಳ ಎಸ್.ಐ.ರಾಮಕೃಷ್ಣ ಭೇಟಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next