Advertisement

ಬೆಳಕು ಯೋಜನೆಯಡಿ ಎಳನೀರಿನ 33 ಮನೆಗಳಿಗೆ ವಿದ್ಯುತ್‌ ಬೆಳಕು

12:25 AM Mar 30, 2023 | Team Udayavani |

ಬೆಳ್ತಂಗಡಿ: ಅರಣ್ಯದಂಚಿನ ಮಲವಂತಿಗೆ ಗ್ರಾಮದ ಎಳನೀರು ಭಾಗದಲ್ಲಿ ವಾಸವಾಗಿದ್ದು, ವಿದ್ಯುತ್‌ ಸಂಪರ್ಕಕ್ಕಾಗಿ ಪರದಾಡಿ ಕೊನೆಗೆ ಊರು ತೊರೆಯಬೇಕಾದ ಸ್ಥಿತಿ ತಲುಪಿದ್ದ 33 ಕುಟುಂಬಗಳ ಮಂದಿಗೆ ಸರಕಾರವು ಬೆಳಕು ಯೋಜನೆಯಡಿ ಈಗ ವಿದ್ಯುತ್‌ ಸಂಪರ್ಕ ಕಲ್ಪಿಸಿದ್ದು, ನಿವಾಸಿಗಳು ಹಬ್ಬ ಆಚರಿಸಿದರು.

Advertisement

ವಿದ್ಯುತ್‌ ಸಂಪರ್ಕದ ಹಿನ್ನೆಲೆಯಲ್ಲಿ ಮಾ. 29ರಂದು ಊರವರ ಸಂಭ್ರಮದಲ್ಲಿ ಶಾಸಕ ಹರೀಶ್‌ ಪೂಂಜ ಭಾಗಿಯಾದರು. ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿ, ಎಳನೀರಿಗೆ 120 ಕಿ.ಮೀ. ಸುತ್ತಿ ಬಳಸಿ ಬರಬೇಕಿತ್ತು. ಇಲ್ಲಿಗೆ ವಿದ್ಯುತ್‌ ಸಂಪರ್ಕ ಸಾಧ್ಯವಾಗಿ ರಲಿಲ್ಲ. ಈಗ ಪ್ರಧಾನಿ ಮೋದಿ ಅವರ ಬೆಳಕು ಯೋಜನೆ ಯಡಿ ಬೆಳಕು ಕಾಣುವಂತಾಗಿದೆ ಎಂದರು.

ಎಳನೀರು ಒಂದೇ ವಾರ್ಡ್‌ಗೆ ಸುಮಾರು 12 ಕೋ.ರೂ. ಅನುದಾನ ಒದಗಿಸಲಾಗಿದೆ. ಪ್ರಮುಖವಾಗಿ ದಿಡುಪೆ -ಸಂಸೆ ರಸ್ತೆಗೆ 5 ಕೋ.ರೂ. ಒದಗಿಸಿದ್ದು, ಬಂಗಾರ ಪಲ್ಕೆಯಲ್ಲಿ 5 ಕೋ.ರೂ. ವೆಚ್ಚದಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣ ನಡೆಯುತ್ತಿದೆ ಎಂದರು.

ಪ್ರಕಾಶ್‌ ಕುಮಾರ್‌ ಮಾತನಾಡಿ, ಇಂದು ಬೆಳಕು ಯೋಜನೆಯ ಮೂಲಕ ಎಳನೀರಿನ 33 ಕುಟುಂಬಗಳಲ್ಲಿ ಬೆಳಕು ಚೆಲ್ಲುವಂಥ ಕಾರ್ಯ ಶಾಸಕ ಹರೀಶ್‌ ಪೂಂಜ ಅವರಿಂದ ಆಗಿದೆ ಎಂದರು.

ಊರಿನ ಹಿರಿಯರಾದ ಡಿ.ಕೆ. ಜೈನ್‌ ಮಾತನಾಡಿದರು. ಮಲವಂತಿಗೆ ಗ್ರಾ.ಪಂ. ಅಧ್ಯಕ್ಷೆ ಅನಿತಾ, ಉಪಾಧ್ಯಕ್ಷ ದಿನೇಶ್‌ ಗೌಡ, ಬೂತ್‌ ಸಮಿತಿ ಕಾರ್ಯದರ್ಶಿ ವಿಜಯ ಕುಮಾರ್‌ ಬಡಾಮನೆ, ತಾಲೂಕು ಎಸ್‌.ಟಿ. ಮೋರ್ಚಾ ಅಧ್ಯಕ್ಷ ಹಾಗೂ ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ ಹರೀಶ್‌ ಎಳನೀರು ಸಹಿತ ಊರಿನ ಹಿರಿಯರು, ಫಲಾನುಭವಿಗಳು ಉಪಸ್ಥಿತರಿದ್ದರು. ಊರಿನವರು ಹರೀಶ್‌ ಪೂಂಜರನ್ನು ಗೌರವಿಸಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next