Advertisement

ಚುನಾವಣೆ : ಆಹಾರ ಪೂರೈಕೆಯಲ್ಲಿ ಸೈ ಎನಿಸಿಕೊಂಡ‌ ಕುಟುಂಬಶ್ರೀ

11:03 PM Apr 23, 2019 | Team Udayavani |

ಕಾಸರಗೋಡು: ಲೋಕಸಭೆ ಚುನಾ ವಣೆ ಅಂಗವಾಗಿ ಜಿಲ್ಲೆಯ ಮತಗಟ್ಟೆಗಳಲ್ಲಿ ಕರ್ತವ್ಯದಲ್ಲಿರುವ ಸಿಬಂದಿಗೆ ಹೊತ್ತು ಹೊತ್ತಿನ ಆಹಾರ ಇತ್ಯಾದಿ ಪೂರೈಕೆ ನಡೆಸಿ ಕುಟುಂಬಶ್ರೀ ಸೈ ಎನಿಸಿಕೊಂಡಿದೆ.

Advertisement

ಕುಡಿಯುವ ನೀರು, ಉಪಾಹಾರ, ಭೋಜನ, ಚಹಾ ಸಹಿತ ಪಾನೀಯಗಳ ವಿತರಣೆ ನಡೆಸುವ ಮೂಲಕ ಕುಟುಂಬಶ್ರೀ ಜಿಲ್ಲಾ ಮಿಷನ್‌ ಉತ್ತಮ ನಿರ್ವಹಣೆ ಒದಗಿಸಿದೆ. ಈ ಹಿಂದಿನ ಚುನಾವಣೆಗಳಲ್ಲಿ ಕೆಲವೆಡೆ ಸಿಬಂದಿಗೆ ಹೊತ್ತುಹೊತ್ತಿನ ಆಹಾರ ವ್ಯವಸ್ಥೆ ಏರುಪೇರಾಗುತ್ತಿದ್ದು, ಕರ್ತವ್ಯಕ್ಕೆ ತೊಡಕಾಗುತ್ತಿತ್ತು. ಇದನ್ನು ಗಮನಿಸಿ ಜಿಲ್ಲಾಧಿ ಕಾರಿ ಡಾ| ಡಿ. ಸಜಿತ್‌ ಬಾಬು ಅವರ ವಿಶೇಷ ಕಾಳಜಿಯ ಹಿನ್ನೆಲೆಯಲ್ಲಿ, ಅವರ ಆದೇಶದಂತೆ ಕುಟುಂಬಶ್ರೀ ಯೂನಿಟ್‌ಗಳ ಮೂಲಕ ಆಹಾರ ಪೂರೈಕೆ ವ್ಯವಸ್ಥಿತವಾಗಿ ನಡೆದಿದೆ.

ಈ ನಿಟ್ಟಿನಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ 200 ರೂ.ನ ಕೂಪನ್‌ ನೀಡಲಾಗಿತ್ತು. ಬೆಳಗ್ಗೆ 5.30ಕ್ಕೆ ಬೆಡ್‌ ಕಾಫಿ, 8.30ಕ್ಕೆ ಬೆಳಗ್ಗಿನ ಉಪಾಹಾರ, 11 ಗಂಟೆಗೆ ಚಹಾ ಮತ್ತು ಲಘು ಉಪಾಹಾರ, ಮಧ್ಯಾಹ್ನ ಒಂದು ಗಂಟೆಗೆ ಭೋಜನ, ಮಧ್ಯಾಹ್ನ 3.30ಕ್ಕೆ ಚಹಾ ಹೀಗೆ ಸಿಬಂದಿಗೆ ವಿತರಣೆ ನಡೆಸಲಾಗಿತ್ತು. ಇವರೊಂದಿಗೆ ಮತಗಟ್ಟೆಗಳಿಗೆ ಅಗತ್ಯದ ಸಾಮಗ್ರಿಗಳನ್ನು ತಲಪಿಸುವ ಸಿಬಂದಿಗೂ ಕುಟುಂಬಶ್ರೀ ವತಿಯಿಂದ ಆಹಾರ ಪೂರೈಕೆ ನಡೆದಿದೆ.

ಮತಗಟ್ಟೆಗಳಲ್ಲಿ ಚುನಾವಣೆ ಪ್ರಕ್ರಿಯೆ ಗಳು ಪೂರ್ಣಗೊಂಡ ಅನಂತರ ಮತಗಟ್ಟೆ ಮತ್ತು ಆಸುಪಾಸಿನ ಪ್ರದೇಶಗಳನ್ನು ಹರಿತ ಕ್ರಿಯಾ ಸೇನೆ ಸದಸ್ಯರ ನೇತೃತ್ವದಲ್ಲಿ ಶುಚೀಕರಣ ನಡೆಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next