Advertisement

ಚುನಾವಣೆ: ಕೆಲವು ಫ‌ಲಕ ಹಾಗೇ; ಕೆಲವಕ್ಕೆ ಕಿರಿಕ್‌!

11:56 PM Apr 10, 2019 | Team Udayavani |

ಉಡುಪಿ: ಚುನಾವಣೆ ಸಮೀಪಿಸುವಾಗ ಚುನಾವಣಾ ಆಯೋಗ ರಾಯಭಾರಿಗಳ ಚಿತ್ರಗಳನ್ನು ಹಾಕಿ ಮತದಾನ ಜಾಗೃತಿ ರೂಪಿಸುತ್ತದೆ. ಮಣಿಪಾಲದ ಸಿಂಡಿಕೇಟ್‌ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿಗೆ ತಿರುಗುವ ಮಾರ್ಗದಲ್ಲಿರುವ ಈ ಫ‌ಲಕ ಇನ್ನೂ 2018ರ ಚುನಾವಣೆಯಲ್ಲಿಯೇ ಇದೆ.

Advertisement

ಚುನಾವಣೆ ನಡೆಯುವ ಸಂದರ್ಭ ಒಂದು ತಿಂಗಳ ಮುಂಚಿತವಾಗಿ ಜಿಲ್ಲಾಡಳಿತ ಪೂರ್ವ ತಯಾರಿಯಲ್ಲಿ ರುತ್ತದೆ.ನೀತಿಸಂಹಿತೆ ಜಾರಿ ಬಂದ ಕ್ಷಣಾರ್ಧದಲ್ಲಿಯೇ ಎಲ್ಲ ರಾಜಕೀಯ ಪಕ್ಷಗಳ ಬೋರ್ಡ್‌ಗಳನ್ನು ತೆಗೆದು ಚುನಾವಣಾ ಇಲಾಖೆ ಕಾರ್ಯಪ್ರವೃತ್ತರಾದರೂ ರಾಹುಲ್‌ ದ್ರಾವಿಡ್‌ ಚಿತ್ರ ಹೊತ್ತ ಈ ಫ‌ಲಕ ಇನ್ನೂ ಹಾಗೇ ಇದೆ. ವಿಧಾನಸಭಾ ಚುನಾವಣೆ ಬಳಿಕ ವಿಧಾನ ಪರಿಷತ್‌, ನಗರಸಭೆ ಚುನಾವಣೆ ನಡೆದು ಈಗ 2019ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಕೆಲವರು ಈ ಬಗ್ಗೆ ದೂರವಾಣಿ ಮೂಲಕ ತಿಳಿಸಿ ತಿಂಗಳು ಕಳೆದರೂ ಫ‌ಲಕದಲ್ಲೇನೂ ಬದಲಾವಣೆ ಕಂಡುಬರಲಿಲ್ಲ.

ಅಧಿಕಾರಿಗಳು ಕಾರುಗಳಿಗೆ ಹಾಕಿದ ಸ್ಟಿಕ್ಕರ್‌ತೆಗೆಯುತ್ತಿದ್ದಾರೆ. ಜನರ ಕಣ್ಣಿಗೆ ಢಾಳಾಗಿ ಕಾಣುವ ಈ ಫ‌ಲಕ ಮಾತ್ರ ಹಾಗೇ ತೋರುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next