Advertisement

ಪಾದಯಾತ್ರೆ ಕಾಂಗ್ರೆಸ್‍ನ ಚುನಾವಣಾ ಗಿಮಿಕ್: ಭರತ್ ಶೆಟ್ಟಿ ಲೇವಡಿ

01:04 PM Jan 10, 2022 | Team Udayavani |

ಮಂಗಳೂರು: ಮೇಕೆದಾಟು ಪಾದಯಾತ್ರೆ ಕಾಂಗ್ರೆಸ್‍ನ ಚುನಾವಣಾ ಗಿಮಿಕ್ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ ಭರತ್ ಶೆಟ್ಟಿ ಲೇವಡಿ ಮಾಡಿದ್ದಾರೆ.

Advertisement

ಇವರು ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಮಹದಾಯಿ ಯೋಜನೆ, ಮೇಕೆದಾಟು ಯೋಜನೆ ಪೂರ್ಣಗೊಳಿಸುವ ಎಲ್ಲಾ ಅವಕಾಶಗಳಿದ್ದು,  ತಮಿಳುನಾಡಿನಲ್ಲಿ ಕಾಂಗ್ರೆಸ್‍ನ ಮಿತ್ರಪಕ್ಷ ಡಿಎಂಕೆ ಅಧಿಕಾರದಲ್ಲಿದೆ ಮಾತುಕತೆ ನಡೆಸಿ ಪೂರ್ಣಗೊಳಿಸಬಹುದಾಗಿದೆ. ನಮ್ಮ ಸರಕಾರವು ಸಂಪೂರ್ಣ ಬೆಂಬಲ ನೀಡಲಿದೆ. ಆದರೆ ರಾಜಕೀಯ ಉದ್ದೇಶದಿಂದ ಕೊರೊನಾ ಮಹಾಮಾರಿಯ ನಡುವೆ ಪಾದಯಾತ್ರೆ ಹಮ್ಮಿಕೊಂಡಿರುವುದು ಅವರಿಗೆ ರಾಜ್ಯದ ಜನರ ಆರೋಗ್ಯದ ಮೇಲೆ ಕಾಳಜಿ ಇಲ್ಲದಂತೆ ಕಾಣುತ್ತಿದೆ. ಅಲ್ಲದೆ ಮೇಕೆದಾಟು ಪಾದಯಾತ್ರೆ ಆರಂಭದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರಿಗೆ ಪಾದಯಾತ್ರೆಯ ನಡುವೆ ವೈಮನಸ್ಸು ಉಂಟಾಗಿದೆ ಎಂದು ನುಡಿದರು.

ಧಾರ್ಮಿಕ ವಿಚಾರಗಳಲ್ಲಿ ಯಾರಾದರೂ ನಂಬಿಕೆಗಳನ್ನು ಲೇವಡಿ ಮಾಡುವುದನ್ನು ಸಹಿಸಲಾಗದು. ಆಯಾ ಸಮಾಜದ ಧರ್ಮಗುರುಗಳು ಮುಖಂಡರು ಇಂತಹ ಕೃತ್ಯ ಎಸಗುವವರಿಗೆ ಸರಿಯಾದ ಮಾರ್ಗದರ್ಶನವನ್ನು ನೀಡುವುದು ಒಳಿತು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next