Advertisement
ಮೌಡ್ಯ ಮೇ 15ರಿಂದ ಆರಂಭಗೊಂಡಿದ್ದು ಇದರ ಮೊದಲೇ ಮದುವೆ ಹಾಗೂ ಇತರ ಸಮಾರಂಭಗಳು ಮುಗಿಯಬೇಕೆಂದು ಅದರ ಮುಂದಿನ ದಿನ ಎಲ್ಲೆಡೆ ಒಮ್ಮೆಲೇ ಸಮಾರಂಭಗಳು ನಡೆದು ಹೋದವು. ವಿದೇಶ ಹಾಗೂ ಇತರೆಡೆಯಿಂದ ಬಂದ ಸಂಬಂಧಿಕರು ಮರಳಿ ತೆರಳಿದ್ದಾರೆ. ಇದರಿಂದ ಈಗ ಗೌಜಿಗದ್ದಲ ಕಡಿಮೆಯಾಗಿದೆ.
ಮಾರುಕಟ್ಟೆಯಲ್ಲಿ ಹಣ್ಣು- ಹಂಪಲು, ತರಕಾರಿ ದರಗಳು ಕೊಂಚ ಏರಿಕೆಯಾಗಿವೆ. ಮಾವು ದರ ತುಸು ಇಳಿಕೆ ಕಂಡಿದೆ. ಸ್ಥಳೀಯ ಹಾಗೂ ಇತರೆಡೆಯಿಂದ ಬರುವ ವಿವಿಧ ಬಗೆಯ ಮಾವು ಗಳು ಮಾರುಕಟ್ಟೆಗೆ ಸಲೀಸಾಗಿ ಆಗಮಿಸುವುದು ಇದಕ್ಕೆ ಕಾರಣ. ಮೇ 17ರಿಂದ ಮುಸ್ಲಿಂ ಬಾಂಧವರಿಗೆ ರಮ್ಜಾನ್ ಹಬ್ಬ ಆರಂಭವಾಗುವುದರಿಂದ ತರಕಾರಿ ಹಾಗೂ ಹಣ್ಣು ಹಂಪಲುಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.
Related Articles
ಬೆಂಗಳೂರು ಹಾಗೂ ಇತರೆಡೆಯಿಂದ ಕೆಲವೇ ಕೆಲವು ಲಾರಿಗಳು ಈಗ ಆಗಮಿಸುತ್ತಿವೆ. ಅಲ್ಲಿನ ವ್ಯಾಪಾರಿಗಳು, ಕಾರ್ಮಿಕರು ಚುನಾವಣೆ ಕಾರ್ಯದಲ್ಲಿ ನಿರತರಾಗಿದ್ದು ಸರಕಾರ ರಚನೆಯಾದ ಮೇಲೆ ವ್ಯಾಪಾರ ಕುದುರಬಹುದು.
– ಅನ್ವರ್, ವ್ಯಾಪಾರಿ
Advertisement