Advertisement

ಕುಂದಾಪುರ: ತಂದೆ ಮೃತಪಟ್ಟರೂ ಕರ್ತವ್ಯಕ್ಕೆ ಹಾಜರಾದ ಮಹಿಳೆ !

12:47 AM May 11, 2023 | Team Udayavani |

ಕುಂದಾಪುರ: ಇಲ್ಲಿನ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಸುಮಲತಾ ಆರೂರು ತಮ್ಮ ತಂದೆ ಮುಕುಂದ ನಾಯ್ಕ (75) ಮೃತಪಟ್ಟಿದ್ದರೂ ಅಂತ್ಯಸಂಸ್ಕಾರ ನೆರವೇರುವ ಮುನ್ನವೇ ಚುನಾವಣ ಕರ್ತವ್ಯಕ್ಕೆ ಹಾಜರಾಗಿ ಕರ್ತವ್ಯಬದ್ಧತೆ ಮೆರೆದಿದ್ದಾರೆ.

Advertisement

ಒಂದೆಡೆ ಅಪ್ಪನ ಶವ, ಮಡುಗಟ್ಟಿದ ಕುಟುಂಬದ ದುಃಖ. ಎಲ್ಲದರ ಮಧ್ಯೆ ಕರ್ತವ್ಯಕ್ಕೆ ಓಗೊಟ್ಟು ಮಾದರಿಯಾಗಿದ್ದಾರೆ. ಬ್ರಹ್ಮಾವರದ ಆರೂರಿನಲ್ಲಿ ಮಂಗಳವಾರ ರಾತ್ರಿ 2.30ರ ವೇಳೆಗೆ ಸುಮಲತಾ ಅವರ ತಂದೆ ಮೃತಪಟ್ಟಿದ್ದರು.

ಮನೆಯಲ್ಲೇ ತಂದೆಯ ಮೃತದೇಹ ಇದ್ದರೂ ಸುಮಲತಾ ಅವರು ಬೆಳಗ್ಗೆ 4.30 ರ ವೇಳೆಗೆ ಕುಂದಾಪುರದ ಭಂಡಾರ್‌ಕಾರ್ಸ್‌ ಕಾಲೇಜಿನ ಸ್ಟ್ರಾಂಗ್‌ ರೂಮಿನ ಕರ್ತವ್ಯಕ್ಕೆ ಹಾಜರಾಗಿ ಬೆಳಗ್ಗೆ 7ರವರೆಗೆ ಕರ್ತವ್ಯ ನಿರ್ವಹಿಸಿದರು. ಬಳಿಕ ಚುನಾವಣಾಧಿಕಾರಿಯೂ ಆದ ಸಹಾಯಕ ಕಮಿಷನರ್‌ ರಶ್ಮಿ ಎಸ್‌.ಆರ್‌. ಅವರು ವಿಷಯವನ್ನು ಮಾನವೀಯ ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ತತ್‌ಕ್ಷಣ ಬದಲಿ ಅಧಿಕಾರಿಯನ್ನು ಕರ್ತವ್ಯಕ್ಕೆ ನಿಯೋಜಿಸಿ ಸುಮಲತಾ ಅವರನ್ನು ಮನೆಗೆ ಕಳುಹಿಸಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next