Advertisement

ಶಾಸಕರಿಗೆ ಪಾಲಿಕೆ ಚುನಾವಣೆ ಅಗ್ನಿಪರೀಕ್ಷೆ

03:38 PM Aug 15, 2021 | Team Udayavani |

ಬೆಳಗಾವಿ: ಮಹಾನಗರಪಾಲಿಕೆ ಚುನಾವಣೆಗೆಸೋಮವಾರದಿಂದ ನಾಮಪತ್ರ ಸಲ್ಲಿಕೆಯಾಗುವಪ್ರಕ್ರಿಯೆ ಆರಂಭವಾಗುವ ಬೆನ್ನಲ್ಲೇ ಕಾಂಗ್ರೆಸ್‌ಮತ್ತು ಬಿಜೆಪಿ ವಲಯದಲ್ಲಿ ಚುನಾವಣೆಯ ಸಿದ್ಧತೆಭರದಿಂದಲೇ ನಡೆದಿದೆ.

Advertisement

ಅದರಲ್ಲೂ ಒಂದು ಹೆಜ್ಜೆಮುಂದಿಟ್ಟಿರುವ ಬಿಜೆಪಿ ಚುನಾವಣೆ ಸಂಬಂಧಕಾರ್ಯಕರ್ತರ ಪೂರ್ವಭಾವಿ ಸಭೆಗಳನ್ನು ಮಾಡುವಮೂಲಕ ನಾವು ಚುನಾವಣೆಗೆ ಸಿದ್ಧ ಎಂಬ ಸಂದೇಶರವಾನಿಸಿದೆ.ಬೆಳಗಾವಿ ಮಹಾನಗರ ಪಾಲಿಕೆಯ ಎಲ್ಲ 58ವಾರ್ಡ್‌ಗಳಿಗೆ ಎರಡು ವರ್ಷದ ನಂತರ ಚುನಾವಣೆನಡೆಯುತ್ತಿದೆ.

ಪಾಲಿಕೆಯ ಗದ್ದುಗೆ ಹಿಡಿಯಲು35ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕಿರುವುದರಿಂದಈ ಸಂಖ್ಯೆಯ ಗಡಿ ದಾಟುವುದು ಬಿಜೆಪಿ ಮತ್ತುಕಾಂಗ್ರೆಸ್‌ಗೆ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಆದರೆಇದು ಅಂದುಕೊಂಡಷ್ಟು ಸುಲಭದ ಮಾತಲ್ಲ.ಮೊದಲಿಂದಲೂ ಇಲ್ಲಿ ಭಾವನಾತ್ಮಕ ವಿಷಯವೇಚುನಾವಣೆಯ ಮುಖ್ಯ ಅಸ್ತ್ರ ಆಗಿರುವುದರಿಂದಎರಡೂ ಪಕ್ಷಗಳು ಇದನ್ನು ಹೇಗೆ ದಾಟಿ ಮತದಾರರಬಳಿಗೆ ಹೋಗುತ್ತವೆ ಎಂಬ ಕುತೂಹಲ ಮೂಡಿದೆ.

ಈ ಹಿಂದೆ ಮಹಾನಗರಪಾಲಿಕೆ ಎಂದರೆ ಅಲ್ಲಿಮರಾಠಿ ಭಾಷಿಕರದ್ದೇ ಪ್ರಾಬಲ್ಯ ಎಂಬ ಮಾತಿತ್ತು.ಕನ್ನಡ ಭಾಷಿಕ ಸದಸ್ಯರು ಗೆದ್ದರೂ ಅವರಿಗೆ ಬೆಂಬಲದಕೊರತೆಯಿಂದ ಅದು ಸುದ್ದಿಯಾಗುತ್ತಲೇ ಇರಲಿಲ್ಲ.ಆಗ ಪಾಲಿಕೆಯಲ್ಲಿ ಅಭಿವೃದ್ಧಿಯ ಬದಲಾಗಿ ಬರೀಗಡಿ ಮತ್ತು ಭಾಷಾ ವಿವಾದದ್ದೇ ಸುದ್ದಿಯಾಗುತ್ತಿತ್ತು.ಜನರೂ ಸಹ ರೋಸಿ ಹೋಗಿದ್ದರು. ಆದರೆ ಈಗಮೊದಲಿನ ವಾತಾವರಣ ಇಲ್ಲ. ಕಾಲ ಬದಲಾದಂತೆಪಾಲಿಕೆಯ ರಾಜಕಾರಣ ಸಹ ಬದಲಾಗಿದೆ.ಹೊಂದಾಣಿಕೆ ರಾಜಕಾರಣ ಮೇಲುಗೈ ಪಡೆದಿದೆ.ಅಧಿಕಾರಕ್ಕಾಗಿ ಕನ್ನಡ ಮತ್ತು ಮರಾಠಿ ಭಾಷಿಕರುಕೈಜೋಡಿಸುತ್ತಿದ್ದಾರೆ.

ಆದರೆ ಇದರಿಂದ ಬೆಳಗಾವಿಅಭಿವೃದ್ಧಿಗೆ ಯಾವುದೇ ಪ್ರಯೋಜನವಾಗಿಲ್ಲಎಂಬುದು ಎಲ್ಲರಿಗೂ ಗೊತ್ತಿದೆ. ಇದುಅಧಿಕಾರಕ್ಕಾಗಿ ಮಾಡಿಕೊಂಡ ಹೊಂದಾಣಿಕೆಎನ್ನುವುದು ಜಗಜ್ಜಾಹೀರಾಗಿದೆ.ಹೊಂದಾಣಿಕೆ ಕೆಲವೊಂದು ಸಲದುಬಾರಿಯಾಗಿ ಪರಿಣಮಿಸಿದ್ದರೂ ಅದರಿಂದಕನ್ನಡ ಸದಸ್ಯರು ಎಚ್ಚೆತ್ತುಕೊಂಡಿಲ್ಲ. ಈ ರೀತಿಯಹೊಂದಾಣಿಕೆ ರಾಜಕಾರಣಕ್ಕೆ ಇತಿಶ್ರೀ ಹಾಡಬೇಕು.ಬೆಳಗಾವಿಯನ್ನು ಅಭಿವೃದ್ಧಿಯ ಕಡೆ ಕರೆದುಕೊಂಡುಹೋಗಬೇಕು.

Advertisement

ಎಲ್ಲಕ್ಕಿಂತ ಮುಖ್ಯವಾಗಿ ಪಕ್ಷಗಳ ಮೇಲೆಕೇಳಿಬರುವ ಆರೋಪಗಳಿಂದ ಮುಕ್ತವಾಗಬೇಕುಎಂಬ ಉದ್ದೇಶದಿಂದ ಇದೇ ಮೊದಲ ಬಾರಿಗೆ ಪಕ್ಷಆಧಾರಿತ ಚುನಾವಣೆಯ ಮಾತು ಕೇಳಿಬರುತ್ತಿದೆ.ಕಾಂಗ್ರೆಸ್‌ ಮತ್ತು ಬಿಜೆಪಿ ಈ ಬಾರಿಯಚುನಾವಣೆಯನ್ನು ಬಹಳ ಪ್ರತಿಷ್ಠೆಯನ್ನಾಗಿತೆಗೆದುಕೊಂಡಿರು ವುದರಿಂದಚುನಾವಣೆಗೆ ಎಲ್ಲಿಲ್ಲದ ಮಹತ್ವ ಬಂದಿದೆ.ಎರಡೂ ಪಕ್ಷಗಳಿಗೆ ಇದು ಒಂದುರೀತಿಯ ಸತ್ವ ಪರೀಕ್ಷೆಯ ಕಾಲ. ಯಾರ ಶಕ್ತಿಎಷ್ಟಿದೆ ಎಂಬುದನ್ನು ತೋರಿಸಲು ಇದು ಒಳ್ಳೆಯಸಮಯ. ಹೀಗಾಗಿ ಎರಡೂ ಪಕ್ಷಗಳಲ್ಲಿ ಬಿರುಸಿನರಾಜಕೀಯ ಚಟುವಟಿಕೆ ಕಾಣುತ್ತಿದೆ.

ರಾಜಕೀಯತಂತ್ರಗಳು, ಹೊಂದಾಣಿಕೆ ರಾಜಕಾರಣ, ಮನವೊಲಿಕೆಪ್ರಯತ್ನಗಳು ತೆರೆಮರೆಯಲ್ಲಿ ಆರಂಭವಾಗಿವೆ.ಈ ಬಾರಿಯ ಚುನಾವಣೆಯನ್ನು ಪಕ್ಷದಚಿಹ್ನೆಯ ಮೇಲೆ ಎದುರಿಸಬೇಕು ಎಂಬುದನ್ನುಮೊದಲೇ ನಿರ್ಧರಿಸಿದ್ದ ಬಿಜೆಪಿ ಅದಕ್ಕಾಗಿ ಒಂದುವರ್ಷದಿಂದಲೇ ತಯಾರಿ ನಡೆಸಿದೆ. ಈಗ ಚುನಾವಣೆದಿನಾಂಕ ಘೋಷಣೆಯಾಗಿದ್ದರಿಂದ ಚುನಾವಣಾಉಸ್ತುವಾರಿಯನ್ನು ಸಹ ಪ್ರಕಟಿಸಿದ್ದು ಜಿಲ್ಲಾಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹಾಗೂಸ್ಥಳೀಯ ಶಾಸಕ ಅಭಯ ಪಾಟೀಲ ಅವರ ಹೆಗಲಿಗೆಚುನಾವಣೆಯ ಜವಾಬ್ದಾರಿ ವಹಿಸಲಾಗಿದೆ.

ಇನ್ನೊಂದು ಕಡೆ ಸ್ಥಳೀಯ ಮುಖಂಡರು ಹಾಗೂಕಾರ್ಯಕರ್ತರ ಅಭಿಪ್ರಾಯದಂತೆ ಮುನ್ನಡೆಯಲುಆಲೋಚಿಸಿರುವ ಕಾಂಗ್ರೆಸ್‌ ಚುನಾವಣೆಯಹೊಣೆಯನ್ನು ಮಾಜಿ ಸಚಿವ ಎಂ.ಬಿ. ಪಾಟೀಲಅವರಿಗೆ ವಹಿಸಿದೆ. ಎಂ.ಬಿ. ಪಾಟೀಲ ನೇತೃತ್ವದ ತಂಡಸೋಮವಾರ ಬೆಳಗಾವಿಯಲ್ಲಿ ಸಭೆ ನಡೆಸಿ ಮುಂದಿನನಿರ್ಧಾರ ಕೈಗೊಳ್ಳಲಿದೆ.ಇಲ್ಲಿ ರಾಜಕೀಯ ಪಕ್ಷಗಳಿಗಿಂತ ಸ್ಥಳೀಯ ಶಾಸಕರಿಗೆನಿಜವಾಗಿಯೂ ಅವರ ಸಾಮರ್ಥ್ಯ ಪರೀಕ್ಷಿಸುವಸಮಯ ಎಂದರೆ ತಪ್ಪಿಲ್ಲ. ಅದರಲ್ಲಿಯೂ ಬಿಜೆಪಿಯಶಾಸಕರಾದ ಅಭಯ ಪಾಟೀಲ ಮತ್ತು ಅನಿಲಬೆನಕೆ ಅವರಿಗೆ ಈ ಪಾಲಿಕೆ ಚುನಾವಣೆ ಅಕ್ಷರಶಃಅಗ್ನಿಪರೀಕ್ಷೆ. ಪಾಲಿಕೆಯ ಒಂದೆರಡು ವಾರ್ಡ್‌ಗಳನ್ನುಬಿಟ್ಟರೆ ಉಳಿದ ಎಲ್ಲ ಕ್ಷೇತ್ರಗಳು ಬೆಳಗಾವಿ ದಕ್ಷಿಣಹಾಗೂ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಬರುವುದರಿಂದ ಬಿಜೆಪಿ ಶಾಸಕರಿಗೆ ತಮ್ಮ ಸಾಮರ್ಥ್ಯತೋರಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ ಮತ್ತು ಲಕ್ಷ್ಮೀಹೆಬ್ಟಾಳಕರ ಅವರಿಗೆ ಈ ಪಾಲಿಕೆ ಚುನಾವಣೆಯಿಂದಹೆಚ್ಚಾಗಿ ಕಳೆದುಕೊಳ್ಳುವುದು ಅಥವಾಗಳಿಸುವುದೇನಿಲ್ಲ. ಆದರೆ ನಗರದ ರಾಜಕಾರಣದಮೇಲೆ ತಮ್ಮ ಹಿಡಿತ ಸಾಧಿಸುವ ನಿಟ್ಟಿನಲ್ಲಿ ಈಶಾಸಕದ್ವಯರಿಗೂ ಸಹ ಪಾಲಿಕೆ ಚುನಾವಣೆ ಅಷ್ಟೇಪ್ರತಿಷ್ಠೆಯಾಗಿದೆ.ಕಾಂಗ್ರೆಸ್‌ ಹಾಗೂ ಬಿಜೆಪಿಯ ರಾಜಕೀಯ ತಂತ್ರಈ ರೀತಿಯಾದರೆ ಇನ್ನು ಪಾಲಿಕೆಯ ಗದ್ದುಗೆ ಮೇಲೆಕಣ್ಣಿಟ್ಟಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತುಶಿವಸೇನೆ ಅಭಿವೃದ್ಧಿಯ ಬದಲು ಭಾವನಾತ್ಮಕವಾಗಿಮತದಾರರನ್ನು ಸೆಳೆಯುವ ತಂತ್ರಕ್ಕೆ ಮುಂದಾಗಿದೆ.ಇದಕ್ಕೆ ಮತ್ತೂಮ್ಮೆ ಮಹಾರಾಷ್ಟ್ರದ ಮುಖಂಡರಸಹಾಯದ ಕಡೆ ಮುಖ ಮಾಡಿವೆ.

ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next