Advertisement

ಹುಣಸೂರು: ನಗರಸಭೆ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ನ ಸೌರಭ ಸಿದ್ದರಾಜು ಅವಿರೋಧ ಆಯ್ಕೆ

05:38 PM Oct 11, 2021 | Team Udayavani |

ಹುಣಸೂರು:  ನಗರಸಭೆ ನೂತನ ಅದ್ಯಕ್ಷರಾಗಿ ಕಾಂಗ್ರೆಸ್ ನ ಸೌರಭ ಸಿದ್ದರಾಜು ಅವಿರೋಧವಾಗಿ ಆಯ್ಕೆಯಾದರು.

Advertisement

ನಗರದ ಸರಸ್ವತಿ ಪುರಂ ಬಡಾವಣೆ 15 ನೇ( ವಾಡ್೯) ನ ಸದಸ್ಯೆ ಸೌರಭ ಸಿದ್ದರಾಜು ಒಬ್ಬರೇ ನಾಮಪತ್ರಸಲ್ಲಿ ಸಿದ್ದರಿಂದ ಉಪ ವಿಭಾಗಾಧಿಕಾರಿ ವರ್ಣಿತ್ ನೇಗಿಯವರು ಅವಿರೋಧ ಆಯ್ಕೆಯನ್ನು ಘೋಷಿಸಿದರು.

ಕಾಂಗ್ರೆಸ್ ನ 14 ಮಂದಿ, ಎಸ್ ಡಿಪಿ ಐನ ಇಬ್ಬರು ಹಾಗೂ ನಾಲ್ವರು ಪಕ್ಷೇತರ ಸದಸ್ಯರು ಮತ್ತೆ ಶಾಸಕ ಎಚ್.ಪಿ.ಮಂಜುನಾಥ್ ಚುನಾವಗೆಯಲ್ಲಿ ಹಾಜರಿದ್ದರು.

ಸಂಸದ ಪ್ರತಾಪಸಿಂಹ, ಎಂ.ಎಲ್.ಸಿ. ಅಡಗೂರು ಎಚ್.ವಿಶ್ವನಾಥ್ .ಜೆಡಿಎಸ್ ಏಳು ಮಂದಿ ಹಾಗೂ ಪಕ್ಷೇತರ ಸದಸ್ಯ ದೊಡ್ಡ ಹೆಜ್ಜೂರು ರಮೇಶ್ ಗೈರು ಹಾಜರಾಗಿದ್ದರು.

Advertisement

ಸಂಭ್ರಮ:

ಅಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದಂತೆ ನಗರಸಭೆ ಮೈದಾನದಲ್ಲಿ ನೆರೆದಿದ್ದ ಪಕ್ಷದ ಕಾರ್ಯ ಕರ್ತರು ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ನಂತರ ಅಧ್ಯಕ್ಷೆ ಸೌರಭ ಸಿದ್ದರಾಜು.ಶಾಸಕ ಮಂಜುನಾಥರನ್ಬು ಮೆರೆವಣಿಗೆಯಲ್ಲಿ ಕಾಂಗ್ರೆಸ್ ಕಚೇರಿಗೆ ಕರೆದೊಯ್ದು ಅಲ್ಲಿ ಬೃಹತ್ ಸೇಬಿನ ಹಾರ ಹಾಕಿ ಸಂಭ್ರಮಿಸಿ .ಸಿಹಿ ಹಂಚಿದರು.

ಮೆರವಣಿಗೆ ತೆರಳುವ ವೇಳೆ ಸಂವಿದಾನ ಸರ್ಕಲ್ ನಲ್ಲಿ ಜೆಸಿಬಿ ಮೂಲಕ ತಮ್ಮ ನಾಯಕರಿಗೆ ಹೂಮಳೆ ಗರೆದರು.

Advertisement

Udayavani is now on Telegram. Click here to join our channel and stay updated with the latest news.

Next