Advertisement

ARRESTED: ಶುಭ ಸಮಾರಂಭಗಳಲ್ಲಿ ವೃದ್ಧರ ಚಿನ್ನಾಭರಣ ಕಳವು; 2 ಬಂಧನ

11:20 AM Mar 27, 2024 | Team Udayavani |

ಬೆಂಗಳೂರು: ಜಾತ್ರೆ, ದೇವರ ಉತ್ಸವ ಹಾಗೂ ಶುಭ ಸಮಾರಂಭಗಳಿಗೆ ಬರುವ ವೃದ್ಧರ ಚಿನ್ನಾಭರಣ ದೋಚುತ್ತಿದ್ದ ಇಬ್ಬರು ಮಹಿಳೆಯರನ್ನು ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ರಾಜಾಜಿನಗರ ನಿವಾಸಿಗಳಾದ ಆಶಾ ಮತ್ತು ಜ್ಯೋತಿ ಬಂಧಿತರು. ಆರೋಪಿಗಳಿಂದ 14.9 ಲಕ್ಷ ರೂ. ಮೌಲ್ಯದ 233 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆ ಯಲಾಗಿದೆ. ಆರೋಪಿಗಳ ವಿರುದ್ಧ ಈ ಹಿಂದೆ ನಗರ ಮತ್ತು ಗ್ರಾಮಾಂತರ ಠಾಣೆಗಳಲ್ಲಿ ಕಳವು ಪ್ರಕರಣಗಳು ದಾಖಲಾಗಿದ್ದು, ಜೈಲಿಗೂ ಹೋಗಿದ್ದರು. ಆರೋಪಿ ಗಳು ಜಾತ್ರೆ, ದೇವರ ಉತ್ಸವ, ಶುಭ ಸಮಾರಂಭಗಳಿಗೆ ಹೋಗುತ್ತಿದ್ದ ಆರೋಪಿಗಳು ವಯಸ್ಸಾದ ಮಹಿಳೆಯ ರನ್ನು ಟಾರ್ಗೆಟ್‌ ಅವರನ್ನು ಮಾತನಾಡಿಸುತ್ತಾ, ಗಮನ ಬೇರೆಡೆ ಸೆಳೆದು ಚಿನ್ನಾಭರಣ ದೋಚಿ ಪರಾರಿ ಯಾಗುತ್ತಿದ್ದರು. ಇತ್ತೀಚೆಗೆ ಮಹಿಳೆಯೊಬ್ಬರು ಸುಬ್ರ ಹ್ಮಣ್ಯಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದ ಮಹಿಳೆಯೊಬ್ಬರ ಚಿನ್ನಾಭರಣ ದೋಚಿದ್ದರು. ಆರೋಪಿಗಳ ಬಂಧನದಿಂದ 7 ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next