Advertisement

ಆಟೋ ರಿಕ್ಷಾ ಓಡಿಸುತ್ತಿದ್ದ ಶಿಂಧೆ ಮಹಾ ಗಾದಿಗೆ ಏರಿದ್ದು ಹೇಗೆ ?

08:58 PM Jun 30, 2022 | Team Udayavani |

ಮುಂಬಯಿ : ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆಯವರು ಸತಾರಾದ ಜಾವಲಿ ತಾಲೂಕಿನವರುವರು. ಅವರ ಕುಟುಂಬ ಜೀವನೋಪಾಯಕ್ಕಾಗಿ ಥಾಣೆಗೆ ಸ್ಥಳಾಂತರಗೊಂಡಿತ್ತು. ಏಕನಾಥ್ ಅವರು ಥಾಣೆಯ ಮಂಗಳಾ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜಿನಲ್ಲಿ ಓದಿದ್ದಾರೆ.ಅವರು ತಮ್ಮ ಕುಟುಂಬವನ್ನು ಪೋಷಿಸಲು ಆಟೋರಿಕ್ಷಾವನ್ನು ಓಡಿಸುತ್ತಿದ್ದರು ಎನ್ನುವುದು ವಿಶೇಷವಾಗಿದೆ.

Advertisement

ಶಿವಸೇನೆಯ ಪರಮೋಚ್ಛ ನಾಯಕ ಬಾಳಾ ಸಾಹೇಬ್ ಠಾಕ್ರೆ ಮತ್ತು ಅವರ ಗರಡಿಯಲ್ಲಿ ಪಳಗಿದ ಶಿಂಧೆ ರಾಜಕೀಯದಲ್ಲಿ ಹಂತ ಹಂತವಾಗಿ ಬಹುಬೇಗ ಉನ್ನತ ಸ್ಥಾನಗಳನ್ನು ಪಡೆದಿದ್ದಾರೆ.

1997ರಲ್ಲಿ ಮೊದಲ ಬಾರಿಗೆ ಥಾಣೆ ಮುನ್ಸಿಪಲ್ ಕಾರ್ಪೊರೇಟರ್ ಆಗಿ ಆಯ್ಕೆಯಾದ ಶಿಂಧೆ ವೇಗದ ರಾಜಕೀಯ ಪ್ರಗತಿ ಸಾಧಿಸಿ 2004 ರಲ್ಲಿ ಮೊದಲ ಬಾರಿಗೆ ಮಹಾರಾಷ್ಟ್ರ ವಿಧಾನಸಭೆಗೆ ಆಯ್ಕೆಯಾದರು. 2019ರ ಗೆಲುವು ಸೇರಿ ಸತತ ನಾಲ್ಕು ಬಾರಿ ವಿಧಾನಸಭೆಗೆ ಚುನಾಯಿತರಾಗಿದ್ದಾರೆ.

2014 ರಾಡು ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದ ಅವರು, 2014 – 2019ರ ವರೆಗೆ ರಾಜ್ಯ ಸರ್ಕಾರದಲ್ಲಿ ಲೋಕೋಪಯೋಗಿ ಕ್ಯಾಬಿನೆಟ್ ಸಚಿವರಾಗಿ, 2019ರಲ್ಲಿ ಉದ್ಧವ್ ಠಾಕ್ರೆ ಅವರ ಸಂಪುಟದಲ್ಲಿ ನಗರಾಭಿವೃದ್ಧಿ ಮತ್ತು ಸಾರ್ವಜನಿಕ ಕಾರ್ಯಗಳ ಸಚಿವರಾಗಿ, ಗೃಹ ಸಚಿವರಾಗಿ ಕಾರ್ಯನಿರ್ವಹಿಸಿದ ರಾಜಕೀಯ ಅನುಭವ ಹೊಂದಿದ್ದಾರೆ.

ಕೊಪ್ರಿ ಪಚ್ಪಪಖಾಡಿ ವಿಧಾನಸಭಾ ಕ್ಷೇತ್ರವನ್ನು ನಾಲ್ಕು ಅವಧಿಗೆ ಪ್ರತಿನಿಧಿಸುತ್ತಿರುವ 58 ರ ಹರೆಯದ ಶಿಂಧೆ ಅವರಿಗೆ ಮುಖ್ಯಮಂತ್ರಿ ಹುದ್ದೆ ಬಂಡಾಯವೆದ್ದ ಬೆನ್ನಲ್ಲೇ ಬಿಜೆಪಿಯ ಕಡೆಯಿಂದ ರಾಜಕೀಯ ರಣತಂತ್ರದ ಭಾಗವಾಗಿ ಉಡುಗೊರೆಯ ರೂಪದಲ್ಲಿ ಅಚ್ಚರಿಯಾಗಿ ಒಲಿದು ಬಂದಿದೆ.

Advertisement

ಬದುಕಿನಲ್ಲಿ ಮರೆಯಲಾಗದ ನೋವು

2 ಜೂನ್ 2000 ರಂದು ನಡೆದ ದುರಂತ ಶಿಂಧೆಯವರ ಬದುಕಿನಲ್ಲಿ ಎಂದು ಮರೆಯಲಾಗದ ಆಗಾಗ ನೆನಪಾಗುವ ದುರಂತ ದಿನವಾಗಿದೆ. ಅವರ ಮಕ್ಕಳಾದ ದಿಪೇಶ್ (11 ವರ್ಷ) ಮತ್ತು ಶುಭದಾ (7 ವರ್ಷ) ಹಳ್ಳಿಯ ಸಮೀಪವಿರುವ ಸರೋವರದಲ್ಲಿ ದೋಣಿ ವಿಹಾರಕ್ಕೆ ತೆರಳಿದ್ದಾಗ ದೋಣಿ ಮಗುಚಿ ಬಿದ್ದು ಇಬ್ಬರೂ ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ದುರಂತದ ಬಳಿಕ ಶಿಂಧೆ ಹಲವು ತಿಂಗಳುಗಳ ಕಾಲ ಖಿನ್ನತೆಗೆ ಒಳಗಾಗಿದ್ದರು. ಶಿವಸೇನೆಯ ಹಿರಿಯ ನಾಯಕ ಆನಂದ್ ದಿಘೆ ಅವರು ಶಿಂಧೆಗೆ ಭಾವನಾತ್ಮಕ ಬೆಂಬಲವನ್ನು ನೀಡಿ ಅವರ ಮನಸ್ಸಿನ ನೋವನ್ನು ದೂರ ಮಾಡಲು, ಖಿನ್ನತೆಯಿಂದ ದೂರವಿರಿಸಲು ರಾಜಕೀಯವಾಗಿ ಹೆಚ್ಚು ಕ್ರೀಯಾಶೀಲರನ್ನಾಗಿಸಿದರು.

ನೋವಿನ ಗಳಿಗೆಯಲ್ಲಿ ನನ್ನ ಕುಟುಂಬಕ್ಕೆ ನನ್ನ ಅಗತ್ಯವಿತ್ತು. ಈ ವೇಳೆ ದಿಘೆ ಸಾಹೇಬರು, ‘ಈ ಸಮಾಜಕ್ಕೆ ನಿಮ್ಮ ಅವಶ್ಯಕತೆ ಬಹಳ ಇದೆ. ನಿಮ್ಮ ಕುಟುಂಬ ಅಷ್ಟು ಚಿಕ್ಕದಲ್ಲ, ದೊಡ್ಡ ಕುಟುಂಬ. ನೀವು ಜನರಿಗಾಗಿ ಕೆಲಸ ಮಾಡಲು ಬಯಸುವವರು ಎಂದು ಧೈರ್ಯ ತುಂಬಿದ್ದನ್ನು ಶಿಂಧೆ ಕಾರ್ಯಕ್ರಮವೊದರಲ್ಲಿ ಕಂಬನಿ ಸಹಿತ ಹೇಳಿಕೊಂಡಿದ್ದರು.

ಶಿಂಧೆಯವರ ಇನ್ನೋರ್ವ ಪುತ್ರ ಡಾ. ಶ್ರೀಕಾಂತ್ ಶಿಂಧೆ ಅವರು ಮೂಳೆ ಶಸ್ತ್ರಚಿಕಿತ್ಸಕರಾಗಿದ್ದು, ಅವರು 2014 ರಲ್ಲಿ ಕಲ್ಯಾಣ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದು, 2019 ರಲ್ಲಿ ಮರು ಆಯ್ಕೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next