Advertisement

ಕುರುಡು ಹಮ್ಮು ಬೇಟೆಯಾಡಿ ಸ್ನೇಹ ನರಳಿದೆ!

07:56 PM Dec 30, 2020 | Team Udayavani |

ಆ ಇಬ್ಬರು ಹೆಣ್ಣುಮಕ್ಕಳ ಪರಿಚಯವೂ ನನಗಿತ್ತು. “ಸಾಮಾಜಿಕ ಜಾಲತಾಣಗಳಿಂದ ಪರಿಚಿತರಾದೆವು. ಹವ್ಯಾಸ, ಅಭಿರುಚಿಗಳು ನಮ್ಮನ್ನು ಆಪ್ತ ಮಿತ್ರರನ್ನಾಗಿ ಮಾಡಿವೆ…”ಅಂದಿದ್ದರು. ಅವರ ಪತಿ, ಮಕ್ಕಳು ಕೂಡಾ ಪರಸ್ಪರ ಮಿತ್ರರಾದರು. ಅವರ ಸುತ್ತಾಟ, ಓಡಾಟಇತ್ಯಾದಿಗಳನ್ನು ದಾಖಲಿಸಿಸಾಮಾಜಿಕ ಜಾಲತಾಣಗಳಲ್ಲಿಬಿತ್ತರಿಸಿದ್ದೂ ಆಯಿತು. ಅಡುಗೆ, ಬಟ್ಟೆ, ಬಂಗಾರ.. ಇತ್ಯಾದಿ ಹಂಚಿಕೊಂಡಿದ್ದೂ ಆಯಿತು. ಕೆಲವೇ ತಿಂಗಳುಗಳು ಅಷ್ಟೇ..!

Advertisement

ಈಗ ಒಬ್ಬರ ಮುಖ ಅತ್ತ, ಒಬ್ಬರ ಮುಖ ಇತ್ತ. ಹಾಗಂತ ದೊಡ್ಡ ಜಗಳವೇನಿಲ್ಲ. ಸದಾ ಅಂಟಿಕೊಂಡು ಇದ್ದಂತಿದ್ದವರಿಗೆ.. ಈಗ ಮಾತೇಬೇಕಿಲ್ಲವೆನ್ನುವಷ್ಟು ಮೌನ..,ಅಸಹನೆ..! ಒಬ್ಬರನ್ನೊಬ್ಬರು ಬಹಿರಂಗವಾಗಿದೂಷಿಸುವಷ್ಟು ರೇಜಿಗೆ. ಏನು ಕಾರಣ..? ಊಹೂಂ..ಅದೇ ಸ್ಪಷ್ಟವಿಲ್ಲ.. ಹೆಣ್ಣುಮಕ್ಕಳ ಮಧ್ಯೆ ಬಹಳಷ್ಟು ಸಲ ಇಂಥವು ನಡೆಯುತ್ತೆ. ಏನಾಯಿತು ಅಂತಲೇ ಗೊತ್ತಾಗುವುದಿಲ್ಲ.

ಅರ್ಥವಾಗುವ ಹೊತ್ತಿಗೆ ಸಂಬಂಧ ಹಳಸಿದ ವಾಸನೆ ಬಂದುಬಿಟ್ಟಿರುತ್ತದೆ. ಇಬ್ಬರ ಮಧ್ಯೆ ಪ್ರತಿಷ್ಠೆಯ (EGO) ಮಾತೇ ಮುಖ್ಯವಾಗಿ ಮತ್ತೆ ಜೋಡಿಸುವುದೂ ಕಷ್ಟವಾಗಿಬಿಡು ತ್ತದೆ. ಸಂತೋಷಕ್ಕೆ, ಸಂಭ್ರಮಕ್ಕೆ ಕಾರಣವಾಗಿದ್ದ ಸ್ನೇಹವೊಂದು ಮನಃಶಾಂತಿಗೆ ಮಾರಕವಾಗಿ ನೋಡುಗರ ನಗೆಪಾಟಲಿಗೆ ಈಡಾಗಿಬಿಡುತ್ತದೆ. ಹಾಗಂತ ಅವರ್ಯಾರೂ ಕೆಟ್ಟವರಲ್ಲ.”ಅತೀ ಸರ್ವತ್ರ ವರ್ಜಯೇತ್‌.. ‘ ಎಂಬ ಮಾತಿದೆ. ಇಲ್ಲಿ ಆಗಿದ್ದೂ ಅದೇ..! ಈ “ಅತೀ’ ಒಡನಾಟವೇ ಒಮ್ಮೊಮ್ಮೆ ವಿಲನ್‌ ಆಗಿಬಿಡುತ್ತದೆ..!

ನಡುವೆ ಅಂತರವಿರಲಿ! :  ಸ್ನೇಹವೆಂಬುದು ಒಂದು ಸುಂದರ ಅನುಭೂತಿ.ಪರಸ್ಪರ ಪ್ರೀತಿ, ಗೌರವ, ನಂಬಿಕೆ ಇವುಗಳ ಜೊತೆಯಲ್ಲೇ ಒಂದು ಆರೋಗ್ಯಕರ “ಅಂತರ’ ವನ್ನೂ ಕಾಯ್ದುಕೊಳ್ಳಬೇಕಾಗುವುದು ಬಹಳ ಮುಖ್ಯ. ಒಂದಷ್ಟುಸಂಯಮದ ಬೇಲಿಯನ್ನು ಅವರಿಗವರೇ ಹಾಕಿಕೊಂಡರೆ ಒಳ್ಳೆಯದು ಹಾಗೆ ನೋಡಿದರೆ ಎಷ್ಟೋ ಸಲ ಈ ಮನಸ್ತಾಪಗಳಿಗೆ ನಿರ್ದಿಷ್ಟ ಕಾರಣಗಳೇ ಇರುವುದಿಲ್ಲ..! “ಫೋನ್‌ ಮಾಡಿಲ್ಲ. ನಾನು ಮಾಡಿದಾಗಲೂ ಉತ್ತರಿಸಿಲ್ಲ. ಸಮಯಕ್ಕೆ ಬೇಕಿತ್ತು, ನನ್ನ ಸ್ನೇಹ ಬಳಸ್ಕೊಂಡಳು ಅಷ್ಟೇ..” ಎಂಬಂಥ ಬಾಲಿಶ ಆರೋಪಗಳೂ ಇರಬಹುದು. ಸಣ್ಣದೊಂದುಪೂರ್ವಾಗ್ರಹ ಪೀಡಿತ ಅನಿಸಿಕೆಗೆ ಯಾರೋ ಕಿವಿ ಚುಚ್ಚಿದ ಮಾತೂ ಇರಬಹುದು. ಕೇಳಿಸಣ್ಣವರಾಗೋದ್ಯಾಕೆ ಎಂಬ ಪೆದ್ದು ತೀರ್ಮಾನವೂ ಇರಬಹುದು. ಒಟ್ಟಿನಲ್ಲಿ ಅವರವರ ಅಹಂ, ಪ್ರತಿಷ್ಠೆ ಯಿಂದಾಗಿ ಸುಂದರ ಸ್ನೇಹ ಬಲಿಯಾಗುತ್ತದೆ. ಸ್ನೇಹದ ರುಚಿ ಹದಗೆಡದಿರಲು ಕುತೂಹಲವನ್ನು ಉಳಿಸಿಕೊಳ್ಳಲು ಇಂಥ ಒಂದಷ್ಟು ನಿಯಮಗಳನ್ನು ಪಾಲಿಸುವುದು ಒಳ್ಳೆಯದು…

1.ಎಷ್ಟೇ ಸ್ನೇಹವಿರಲಿ, ಸಾಧ್ಯವಾದಷ್ಟೂ ಬೆಲೆಬಾಳುವ ವಸ್ತುಗಳ ವಿನಿಮಯಮಾಡಿಕೊಳ್ಳದಿರುವುದೇ ಕ್ಷೇಮ. ಒಮ್ಮೆ ಅಂಥಪರಿಸ್ಥಿತಿ ಬಂದಲ್ಲಿ ಅದರ ನಷ್ಟ ಭರಿಸುವ ಹೊಣೆಇರಬೇಕು. ಹಾಗೆಯೇ ನಮ್ಮ ವಸ್ತುವಿಗೆನಷ್ಟವಾದಲ್ಲಿ ಅದನ್ನು ಸ್ವೀಕರಿಸುವ ಮನೋಭಾವವೂ ಬೇಕು. ನೆನಪಿರಲಿ: ವಸ್ತುವಿಗಿಂತ ಸ್ನೇಹ ಮುಖ್ಯ.

Advertisement

2 .ಎಷ್ಟೇ ಸಲುಗೆ, ಸ್ನೇಹ ಇದ್ದರೂ ಪ್ರತೀ ದಿನ ಮಾತಿಗೆ, ಸಂಪರ್ಕಕ್ಕೆ ಸಿಗಬಾರದು. ಅಲ್ಲೊಂದು ಅಂತರವಿದ್ದರೇ ಚೆನ್ನ.

3 ಏನೇ ಅನುಮಾನ, ಆರೋಪಗಳಿದ್ದರೂ ಪರಸ್ಪರ ಕೂತು ಮಾತಾಡಿ ಪರಿಹರಿಸಿಕೊಳ್ಳಬೇಕು. ಇನ್ನೊಬ್ಬರ ಬಳಿದೂಷಿಸಬಾರದು. .ಹಂಚಿಕೊಂಡ ವೈಯಕ್ತಿಕ ವಿಷಯಗಳನ್ನು ಎಂಥದೇ ಸಂದರ್ಭದಲ್ಲೂಇನ್ನೊಬ್ಬರಲ್ಲಿ ಹೇಳಬಾರದು. ಗೌರವ, ನಂಬಿಕೆ ಸ್ನೇಹದ ಅಡಿಪಾಯ, ಭದ್ರ ಬುನಾದಿ.

4. ಮಿತ್ರರು ಸಂಕಟದಲ್ಲಿದ್ದರೆ ತಕ್ಷಣಕ್ಕೆ ಹೆಗಲು ಕೊಡುವ/ ನಿಭಾಯಿಸುವ / ವಿಚಾರಿಸುವ ಕನಿಷ್ಠ ಸೌಜನ್ಯವನ್ನು ಮರೆಯ  ಬಾರದು.

5. ಪರಸ್ಪರರ ಹವ್ಯಾಸ, ಕಲೆ, ಅಭಿರುಚಿ ಗಳಿಗೆ ಸ್ಪಂದಿಸುತ್ತ, ಪ್ರೋತ್ಸಾಹಿಸುತ್ತ ಬೆಳೆಸಬೇಕು.ಒಟ್ಟಿನಲ್ಲಿ ಜೀವನವೆಂಬ ಈ ಪಯಣದಲ್ಲಿ ಸ್ನೇಹವೆಂಬುದು ಒಂದು ಚೇತೋಹಾರಿಅನುಭವ. ಮಿತ್ರರಿಲ್ಲದ ಬದುಕು ರಸಹೀನ.ಕಷ್ಟ, ಸುಖ, ಯಶಸ್ಸು ಏನೇ ಬರಲಿ.. ಅದನ್ನುಹಂಚಿಕೊಳ್ಳಲು ಮಿತ್ರರಿದ್ದರೆ ಬದುಕು ಸಲೀಸು,ಅರ್ಥಪೂರ್ಣ. ಸ್ನೇಹವನ್ನೇನೋಗಳಿಸಿಬಿಡಬಹುದು. ಆದರೆ ಅದನ್ನು ನಿಭಾಯಿಸುವುದೇ ದೊಡ್ಡ ಸವಾಲು..! ಯಾವುದನ್ನೂ “ಅತೀ’ ಮಾಡಿಕೊಳ್ಳದೆ ಇರುವಂಥ ಸ್ನೇಹ ಸಂಬಂಧಗಳು ಎಲ್ಲರ ಬದುಕನ್ನೂ ಅರಳಿಸಲಿ.. ಕೊನೆತನಕ…!

 

ಸುಮನಾ ಮಂಜುನಾಥ

Advertisement

Udayavani is now on Telegram. Click here to join our channel and stay updated with the latest news.

Next